🔥 🔥 ದಿನಕರ ದೇಸಾಯಿ 🔥🔥
ಹೊಸಗನ್ನಡ ಸಾಹಿತ್ಯದಲ್ಲಿ ಚುಟುಕು ಬ್ರಹ್ಮನೆಂದು ಪ್ರಖ್ಯಾತರಾದವರು ದಿನಕರ ದೇಸಾಯಿಯವರು.ಇವರು ೧೯೦೯ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ದೇಸಾಯಿ ಶಾಲಾ ಮಾಸ್ತರು. ತಾಯಿ ಅಂಬಿಕಾ. ದಿನಕರ ದೇಸಾಯಿ ಅವರು ಮೈಸೂರಿನಲ್ಲಿ ಬಿ. ಎ. ಪದವಿಯನ್ನು ಪಡೆದ ಇವರು ಮುಂಬೈನ ಸೈಂಟ್ ಝೇವಿಯರ್ ಕಾಲೇಜಿನಲ್ಲಿ ಎಂ. ಎ. ಪದವಿಯನ್ನು ಪಡೆದರು. ವಿವಿಧ ಸಂಘಟನೆಗಳ ಸಂಘಟಕರಾಗಿ, ಪತ್ರಿಕಾ ವರದಿಗಾರರಾಗಿ, ಸಂಸದರಾಗಿ ದುಡಿದು ನವೆಂಬರ್ ೬, ೧೯೮೨ ರಲ್ಲಿ ಇಹಲೋಕ ತ್ಯಜಿಸಿದರು.
ಇವರ ಪ್ರಮುಖ ಕೃತಿಗಳು ಹೂಗೊಂಚಲು, ತರುಣರ ದಸರೆ, ಕಡಲ ಕನ್ನಡ, ದಿನಕರ ಚೌಪದಿ, ನಾಕಂಡ ಪಡುವಣ (ಪ್ರವಾಸ ಸಾಹಿತ್ಯ ) ಹೀಗೆ ೧೨ ಕೃತಿಗಳನ್ನು ರಚಿಸಿದ್ದಾರೆ. ಇವರ ದಿನಕರ ಚೌಪದಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
0 Comments