Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]Essay ,Women Empowerment. ಮಹಿಳಾ ಸಬಲೀಕರಣ.

               ಮಹಿಳಾ ಸಬಲೀಕರಣ 



            "ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವಾಗಿರುತ್ತದೆಯೋ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮಗೊಳ್ಳಲಾರದೆ ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯವಾಗಿರುತ್ತದೆ". ಸ್ವಾಮಿ ವಿವೇಕಾನಂದ. 

          ಮಹಿಳೆಯರನ್ನು ಇನ್ನೂ ಒಂದು ಭೋಗದ ವಸ್ತುವಾಗಿ ಉಪಯೋಗಿಸಿ ಎಸೆಯಲಾಗುತ್ತಿದೆ. ಅದರಿಂದ ಸಮಾಜದ ಮುಖ್ಯವಾಹಿನಿಯಿಂದ ಅವಳನ್ನು ದೂರ ಇಟ್ಟು ಕಡೆಗಣಿಸಲಾಗುತ್ತಿರುವುದರಿಂದ ಮತ್ತು ಮಹಿಳೆಯರು ಇನ್ನೂ ಅಶಕ್ತರು ಇರುವದರಿಂದಲೇ ಮಹಿಳಾ ಸಶಕ್ತಿಕರಣ ಎಂಬ ವಿಷಯವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಮತ್ತು ಅವರು ಸಶಕ್ತರಾಗುವ ತನಕ ಮುಂದುವರಿಯುತ್ತಲೇ ಇರುತ್ತದೆ. ಪುರುಷ ಪ್ರಧಾನವಾದ ಈ ಸಮಾಜವು ಮಹಿಳೆಯರಿಗೆ ಯಾವಾಗಲೂ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತವನ್ನು ನಿರಾಕರಿಸುತ್ತಾ ಬಂದಿದೆ. ಈ ಲಿಂಗ ತಾರತಮ್ಯವು ಮಾನವೀಯ ಮುಖವನ್ನು ವಿಕಾರಗೊಳಿಸಿದೆ. ಈ ತಾರತಮ್ಯವು ಹೆಣ್ಣು ಮಗುವಿನ ಜನನಕ್ಕೆ ಮುಂಚೆ ಪ್ರಾರಂಭವಾಗಿ ಅದು ಅವಳ ಹೆಣ್ಣುತನದ ಜೀವನಗುಂಟ ಉಳಿದುಬಿಡುತ್ತದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಮಹಿಳೆಯರಿಗೆ ಉನ್ನತ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಭಾರತದಲ್ಲಿ ಮಹಿಳೆಯರು ಒಟ್ಟು ಜನಸಂಖ್ಯೆಯ ಶೇಕಡಾ 50 ರಷ್ಟನ್ನು ಪ್ರತಿನಿಧಿಸುತ್ತಾರೆ. ಅನಾದಿ ಕಾಲದಿಂದಲೂ ಭಾರತೀಯ ಮಹಿಳೆ ವೈಶಿಷ್ಟ್ಯಪೂರ್ಣವಾಗಿ ಇರುವಳು. ಸ್ನೇಹ, ಸಹನಶೀಲತೆ, ಮಮತೆ ಮುಂತಾದ ಸದ್ಗುಣಗಳ ಖನಿಯಾಗಿರುವ ಮನೆಯ ಸರ್ವತೋಮುಖ ಏಳಿಗೆಗಾಗಿ ಪರಿಶ್ರಮ ಪಡುತ್ತಾ ಆರ್ಥಿಕವಾಗಿ ಪುರುಷನ ಸಮಾನವಾಗಿ ದುಡಿಯುತ್ತಿದ್ದಾರೆ. ಈ ರೀತಿ ಮಹಿಳೆಯರ ಮಹತ್ವವನ್ನು ಅರಿತು ಏನೋ ನಮ್ಮ ಪೂರ್ವಜರು ಮಾತ್ರ ಸ್ಥಾನಕ್ಕೆ ಅತ್ಯಂತ ಗೌರವವನ್ನು ತೋರಿದ್ದಾರೆ. ನಮ್ಮ ರಾಷ್ಟ್ರೀಯತೆಯನ್ನು ಮಾತೆಗೆ ಹೋಲಿಸಿ ಭಾರತಮಾತೆ ಎಂದು ಕರೆಯಲಾಗುತ್ತದೆ ಭಾರತವು ಕೃಷಿ ಪ್ರಧಾನ ದೇಶವಾಗಿದ್ದುದರಿಂದ ಭೂಮಿಯೇ ಜೀವನಾಧಾರಕ್ಕೆ ಪ್ರಮುಖ ಮೂಲವಾಗಿದೆ. ಇದನ್ನು ಕೂಡ ಭೂತಾಯಿ ಎಂಬ ರೂಪದಲ್ಲಿ ಹೆಣ್ಣಿಗೆ ಹೋಲಿಸಲಾಗಿದೆ. ಮಹಿಳೆಗೆ ಇಷ್ಟೆಲ್ಲಾ ಸ್ಥಾನಮಾನ ಅಧಿಕಾರಗಳನ್ನು ಕೊಟ್ಟಿದ್ದಾಗಿಯೂ ಭಾರತದಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಅಂತೆಯೇ "ಮಹಿಳೆ ಇಲ್ಲದ ಜೀವನವು ಅಪೂರ್ಣವಿದ್ದಾಗಲು ಕೂಡ ಮಹಿಳೆಯರನ್ನು ಜೀವನದ ಇನ್ನೊಂದು ಅರ್ಧ ಎಂದು ಯಾವಾಗಲೂ ಪರಿಗಣಿಸಿಲ್ಲ" ಎಂದು ಶ್ರೀ ಸಿಮೋನ್ ಡಿ. ವಿಯರ್ ಹೇಳುತ್ತಾರೆ.


💮💮💮💮💮💮💮💮💮💮💮💮💮💮💮💮💮💮

           ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರ ಸಬಲೀಕರಣಕ್ಕೆ ಸ್ವಾತಂತ್ರ್ಯಕ್ಕಾಗಿ ನಡೆಸಿದ ಅನೇಕ ಮಹನೀಯರ ಬಗ್ಗೆ ತಿಳಿದು ಬರುತ್ತದೆ. ಅವರಲ್ಲಿ ಪ್ರಮುಖರಾದವರೆಂದರೆ ಬುದ್ಧ, ಆದಿಶಂಕರಾಚಾರ್ಯ, ಬಸವಣ್ಣ, ರಾಜಾರಾಮ್ ಮೋಹನ್ ರಾಯ್, ಈಶ್ವರ್ ಚಂದ್ರ ವಿದ್ಯಾಸಾಗರ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮುಂತಾದವರು. ಇವರಲ್ಲದೇ ಬ್ರಿಟಿಷ್ ಸರಕಾರವು ಕೂಡ ಮಹಿಳೆಯರ ಸಶಕ್ತಿಕರಣ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿತು. ಆದರೆ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು ಎಂಬ ಇಚ್ಚೆ ಬಂದಿದ್ದ ಜನರಿಂದ ಮಾತ್ರ ಮಹಿಳೆಯರ ಸಶಕ್ತಿಕರಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಸ್ವಂತ ತಾವೇ ಮುಂದೆ ಬಂದು ಯಾವುದೇ ಜಾತಿ ಧರ್ಮ ಎಂದು ಭೇದ ಮಾಡದೆ ತಮ್ಮ ಸಶಕ್ತೀಕರಣದ ಕಡೆಗೆ ಒಗ್ಗಟ್ಟಾಗಿ ಮುಂದೆ ಸಾಗಬೇಕು ಸಾಮಾನ್ಯ ಮಹಿಳೆಯರು ಈಗಾಗಲೇ ಸಶಕ್ತಿಕರಣ ಗೊಂಡು ಮಹತ್ವದ ಸಾಧನೆ ಮಾಡಿದ ಮಹಿಳೆಯರಿಂದ ಪ್ರಭಾವಿತರಾಗಿ ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು ಇಂತಹ ಪ್ರಭಾವಿ ದಿಟ್ಟ ಮಹಿಳೆಯರಲ್ಲಿ ಪ್ರಮುಖರಾದವರೆಂದರೆ. ಭಾರತದ ಪ್ರಥಮ ಮಹಿಳಾ ಪ್ರಧಾನಿ ಮತ್ತು ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾಗಾಂಧಿ.  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ನೊಬೆಲ್ ಶಾಂತಿ ಪುರಸ್ಕಾರ ಪಡೆದ ಸಮಾಜಸೇವಕಿ ಮದರ್ ತೆರೇಸಾ, ಗಾನಕೋಗಿಲೆ ಸರೋಜಿನಿ ನಾಯ್ಡು, ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತ ಕೃಪಲಾನಿ, ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಮೀನಾಕುಮಾರಿ, ಐಶ್ವರ್ಯ ರೈ ,ಲತಾಮಂಗೇಶ್ಕರ್, ಸೋನಿಯಾಗಾಂಧಿ ಸುಷ್ಮಾಸ್ವರಾಜ್, ಉಮಾಭಾರತಿ ಮುಂತಾದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.


ಮಹಿಳೆ ಅಂದು ಇಂದು 

           ವೇದ ಮತ್ತು ಉಪನಿಷತ್ತುಗಳಲ್ಲಿ ಮಹಿಳೆಗೆ ಮಾತೆ ಹಾಗೂ ದೇವಿ ಎಂಬ ಉನ್ನತ ಪೀಠದಲ್ಲಿ ಪುರುಷರಿಗೆ ಸರಿ ಸಮಾನವಾದ ಸ್ಥಾನವನ್ನು ಕೊಡಲಾಗಿತ್ತು. ಆದರೆ ನಿಜವಾಗಿಯೂ ಅವಳ ಪರಿಸ್ಥಿತಿಯು ತೃಪ್ತಿಕರವಾಗಿರಲಿಲ್ಲ. ಮನು ಸ್ಮೃತಿಯ ದೃಷ್ಟಿಯಲ್ಲಿ ಅವಳು ಅತ್ಯಂತ ಅಮೂಲ್ಯ ಹಾಗೂ ಗೌರವಾನ್ವಿತ ಆಗಿದ್ದಳು ಹಾಗೂ ಅವಳಿಗೆ ಮೊದಲು ತಂದೆ ರಕ್ಷಣೆ ಕೊಡಬೇಕಾಗಿತ್ತು ನಂತರ ಗಂಡ ಮತ್ತು ಕೊನೆಯದಾಗಿ ಅವಳ ಮಗ ಅವಳಿಗೆ ರಕ್ಷಣೆ ಕೊಡಬೇಕಾಗಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಗಂಡಸು ಅಮೂಲ್ಯವಾದ ಜೀವನವನ್ನು ಅಮೂಲ್ಯವಾದ ಸರಕನ್ನಾಗಿ ಬದಲಿಸಿ ಸ್ವಾಧೀನಪಡಿಸಿಕೊಂಡು ತನಗೆ ಬೇಕಾದ ಹಾಗೆ ಉಪಯೋಗಿಸಿಕೊಂಡು ನಂತರ ಬಿಟ್ಟುಬಿಟ್ಟ. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡಲಾಗಿತ್ತು. ಕಾನೂನುಗಳಿದ್ದರೂ ಮಹಿಳೆಯರನ್ನು ಕ್ರೂರವಾಗಿ ಹಾಗೂ ಅನಾಗರಿಕವಾಗಿ ನಡೆಸಿಕೊಂಡು. ಹಿಂಸಿಸಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಬಾಲಕಾರ್ಮಿಕತೆ, ಬಾಲ್ಯವಿವಾಹ ವರದಕ್ಷಿಣೆ ,ಅತ್ಯಾಚಾರ ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ, ಪೀಡಿಸುವುದು, ಬಲತ್ಕಾರದ ವೈಶ್ಯವಾಟಿಕೆ ಮುಂತಾದ ರೂಪಗಳಲ್ಲಿ ಚಿಂತಿಸಲಾಗುತ್ತಿದೆ. ಇಂದು ಒಬ್ಬ ಭಾರತೀಯ ವಿಧವೆಯ ಪರಿಸ್ಥಿತಿಯೂ ಬಹಳ ಶೋಚನೀಯವಾಗಿದೆ. ಅವಳು ತನ್ನ ಕುಟುಂಬ ವರ್ಗದವರಿಂದ ಮತ್ತು ಸಮಾಜದಿಂದ ಕಡೆಗಣಿಸಲ್ಪಟ್ಟಿದ್ದಾಳೆ. ಅವಳ ಮೂಲಭೂತ ಅವಶ್ಯಕತೆಗಳನ್ನು ಜೀವನಾವಶ್ಯಕ ವಸ್ತುಗಳನ್ನು ಕಿತ್ತುಕೊಂಡು ಅವಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಇದು ಪಶ್ಚಿಮಬಂಗಾಲ ,ವಾರಣಾಸಿ ಮತ್ತು  ಎಲ್ಲಮ್ಮನ ಗುಡ್ಡ ಮುಂತಾದ ಸ್ಥಳಗಳಲ್ಲಿ ನಡೆಯುತ್ತಿದೆ ಮಹಿಳೆ ಅವ್ಯವಸ್ಥಿತ ಜೀವನ  ಸಾಗಿಸುತ್ತಿದ್ದಾಳೆ ಮತ್ತು ಅಸಹಾಯಕ ಬಲಿಪಶುವಾಗಿ ಭಯಾನಕ ಏಡ್ಸ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಇಂದಿನ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ. 

          ಮದುವೆಯೂ ಒಂದು ವ್ಯಾಪಾರವಾಗಿಬಿಟ್ಟಿದೆ ಇದು ವರನಿಗೆ ಲಾಭದಾಯಕವಾದರೆ , ವಧುವಿನ ಕಡೆಯವರಿಗೆ ಖರ್ಚಿನದ್ದಾಗಿರುತ್ತದೆ. ವಧುವು ಅಪಾರ ಪ್ರಮಾಣದಲ್ಲಿ ವರದಕ್ಷಿಣೆ ಕೊಡಬೇಕಾಗುತ್ತದೆ. ವರದಕ್ಷಿಣೆಯ ಹೆಸರಿನಲ್ಲಿ ಸಾವಿರಾರು ಮಕ್ಕಳನ್ನು ಹಿಂಸಿಸಿ ಸಾಯಿಸಿಲಾಗುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗ  ಮತ್ತು ಮಹಿಳಾ ಹಕ್ಕು ಆಯೋಗ( ಡಬ್ಲ್ಯೂ ಆರ್ ಸಿ.) ದ ವರದಿಯ ಪ್ರಕಾರ ಮಹಿಳೆಯರ ವಿರುದ್ಧ ಅಪರಾಧಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಅತ್ಯಾಚಾರ ಪ್ರಕರಣಗಳು ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪ್ರಾಪ್ತ ಬಾಲಕಿಯರ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇನ್ನೂ ಅದೆಷ್ಟೋ ಪ್ರಕರಣಗಳು ಸಾಮಾಜಿಕ ಕಳಂಕದ ಹೆದರಿಕೆಯಿಂದಾಗಿ ವರದಿಯಾಗುವುದೇ ಇಲ್ಲ ಇದಕ್ಕೆ ಬಲಿಯಾದ ಹೆಣ್ಣುಮಕ್ಕಳು ಬಹಳ ವೇದನೆ ಅನುಭವಿಸುತ್ತಾರೆ. ಇವರು ಕಾನೂನಿನ ಅಮಾನವೀಯ ಮತ್ತು ಅಸಭ್ಯ ವಿಚಾರಣೆಗೆ ಅವರು ನೈತಿಕ ಸ್ಥೈರ್ಯವನ್ನು ಕುಗ್ಗಿಸಿ ಬಿಡುತ್ತದೆ. ಆರ್ಥಿಕವಾಗಿ ಹಾಗೂ ಬೌದ್ಧಿಕವಾಗಿ ಉನ್ನತ  ಮಟ್ಟದಲ್ಲಿರುವ ಮಹಿಳೆಯರು ಕೂಡ ಅಸಹ್ಯ ವರ್ತನೆಗಳಿಂದ ಹಾಗೂ ಲೈಂಗಿಕ ಶೋಷಣೆಯಿಂದ ಸುರಕ್ಷಿತವಾಗಿಲ್ಲ. ಉದಾಹರಣೆಗೆ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿದ ಕೇರಳದ ಹಿರಿಯ ಮಹಿಳಾ ಐಎಎಸ್ ಅಧಿಕಾರಿಯನ್ನು ರಾಜ್ಯದ ಒಬ್ಬ ಮಂತ್ರಿಯು ಲೈಂಗಿಕ ಶೋಷಣೆಯ ಮಾಡಿದ್ದನ್ನು ಪತ್ರಿಕೆಗಳಲ್ಲೆಲ್ಲನೋಡಿದ್ದೇವೆ. ಈ ರೀತಿಯ ಶೋಷಣೆಯು ಒಬ್ಬ ಹಿರಿಯ ಮಹಿಳಾ ಐಎಎಸ್ ಅಧಿಕಾರಿಗೆ ಆದರೆ ಇನ್ನು ಉಳಿದ ಸಾಮಾನ್ಯ ಮತ್ತು ನಿರ್ಗತಿಕ ಮಹಿಳೆಯರ ಪರಿಸ್ಥಿತಿಯನ್ನು ನಾವು ಉಳಿಸಿಕೊಳ್ಳಬಹುದಾಗಿದೆ. ಭಾರತದ ರಾಜಧಾನಿ ದೆಹಲಿಯ ಬಲತ್ಕಾರದ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ.  ಆದರೆ ಒಬ್ಬ ಭಾರತೀಯ ಮಹಿಳೆಗೆ ಯಾವುದೇ ಸ್ಥಳ ಮತ್ತು ವೇಳೆ ಸುರಕ್ಷಿತವಾಗಿರುವುದುದಿಲ್ಲ. ಸ್ವಿಜರ್ಲ್ಯಾಂಡ್ ರಾಯಭಾರಿ ಕಚೇರಿಯ ಮಹಿಳಾ ಉದ್ಯೋಗಿಯನ್ನು ನಮ್ಮ ರಾಷ್ಟ್ರಪತಿಯ ಅಂಗರಕ್ಷಕರೇ ಬಲತ್ಕಾರ ಮಾಡಿದರು ಇದಕ್ಕೆ ಒಂದು ನಿದರ್ಶನವಾಗಿದೆ. ಹಾಗೆ ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ಜರ್ಮನಿಯ ಯುವತಿಯನ್ನು ಟ್ಯಾಕ್ಸಿ ಚಾಲಕರು ಅಪಹರಿಸಿ ಬಲತ್ಕಾರ ಮಾಡಿದರು ಈ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಕೂಡ ವಿಧಿಸಿದೆ. ಬಲತ್ಕಾರಕ್ಕೆ ಒಳಗಾದ ಮಹಿಳೆಯ ಬಲತ್ಕಾರಕ್ಕೆ ಒಳಗಾದವಳು ಎಂಬ ಹಣೆಪಟ್ಟಿ ಹಚ್ಚಿಕೊಂಡು ವಿವಿಧ ರೀತಿಯ ಮಾನಸಿಕ ಮತ್ತು ದೈಹಿಕ ಯಾತನೆಗಳನ್ನು ಅನುಭವಿಸುತ್ತಾಳೆ. ಈ ಎಲ್ಲಾ ಶೋಷಣೆಗಳ ವಿರುದ್ಧ ಮಹಿಳೆ ದನಿಯೆತ್ತಬೇಕು ಪ್ರತಿಭಟನೆ ಮಾಡಿ ಹೋರಾಡಬೇಕು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕಾನೂನಿನ ಸಹಾಯ ಪಡೆಯಬೇಕು. ಬಾಲ್ಯವಿವಾಹ ಶಿಶುಹತ್ಯೆ ವರದಕ್ಷಿಣೆ ಸಾವುಗಳು ಹೀಗೆ ಹೆಣ್ಣುಮಕ್ಕಳ ಅಶ್ಲೀಲತೆಯ ಪ್ರದರ್ಶನ ಮತ್ತು ಅನೈತಿಕವಾಗಿ ಮಾರಾಟ ಮಾಡುವುದರ ಮೂಲಕ ಹೆಣ್ಣುಮಕ್ಕಳನ್ನು ವ್ಯಾಪಾರಿಕರಣ ಗೊಳಿಸಲಾಗುತ್ತಿದೆ ಆರ್ಥಿಕವಾಗಿ ಹಿಂದುಳಿದ ಜನಾಂಗದ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಲಾಗುತ್ತಿದೆ.


ಇತರ ಕ್ಷೇತ್ರಗಳಲ್ಲಿ ಮಹಿಳೆಯ ಸಬಲೀಕರಣ. 

          ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು. ಮಕ್ಕಳನ್ನು ಹೆರುವುದು ಅವುಗಳ ಲಾಲನೆ, ಪಾಲನೆ ಮಾಡುವುದು ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಮಾತ್ರ ಅವಳ ಕೆಲಸವಾಗಿತ್ತು. ಆದರೆ ಈಗ ಕಾಲ ಬದಲಾಗುತ್ತಿದೆ. ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದ್ದಾರೆ. ಅವರ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ ಮತ್ತು ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಬೆಳೆದಿದ್ದಾಳೆ. ಮಹಿಳೆಯರು ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಸರ್ಕಾರವು ಹಿಂದುಳಿದ ವರ್ಗದ ಮಹಿಳೆಯರಿಗಾಗಿ ವಿಶೇಷ ಸವಲತ್ತುಗಳನ್ನು ಮತ್ತು ಮೀಸಲಾತಿ ಸೌಲಭ್ಯಗಳನ್ನು   ಕಲ್ಪಿಸಿಕೊಟ್ಟಿದೆ.


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಮಹಿಳಾ ಸಬಲೀಕರಣದಲ್ಲಿ ಸರ್ಕಾರದ ಪಾತ್ರ. 

           ಆರನೇ ಪಂಚವಾರ್ಷಿಕ ಯೋಜನೆಯವರೆಗೆ ಮಹಿಳೆಯರಿಗಾಗಿಯೇ ಯಾವುದೇ ಪ್ರತ್ಯೇಕ ಅಭಿವೃದ್ಧಿ ಯೋಜನೆಗಳು ಹಾಕಿಕೊಂಡಿರಲಿಲ್ಲ. ಈ ಯೋಜನೆಯಲ್ಲಿ ಮಹಿಳೆಯರಿಗಾಗಿ ಕೆಲವೊಂದು ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. 1987 ರಲ್ಲಿ ಮಹಿಳಾ ತರಬೇತಿ ಮತ್ತು ಉದ್ಯೋಗಕ್ಕೆ ನೆರವು ನೀಡುವ ಯೋಜನೆಯನ್ನು, ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಜಾರಿಗೆ ತರಲಾಯಿತು. 1982ರ ಎರಡರಲ್ಲಿ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಯಿತು. 1988 ರಲ್ಲಿ ರಾಷ್ಟ್ರೀಯ ಮಹಿಳಾ ಸಮೃದ್ಧಿ ಯೋಜನೆ 1995 ರಲ್ಲಿ ಇಂದಿರಾ ಮಹಿಳಾ ಯೋಜನೆಯನ್ನು ಮತ್ತು 2001ರಲ್ಲಿ ಸ್ವಯಂಸಿದ್ದ ಯೋಜನೆಗಳನ್ನು ಜಾರಿಗೆ ತರಲಾಯಿತು. ಗ್ರಾಮೀಣ ಜನತೆಗೆ ಉದ್ಯೋಗ ಒದಗಿಸುವ ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ್  ಯೋಜನೆ ಅಡಿಯಲ್ಲಿ ಶೇಕಡಾ 40ರಷ್ಟು ಫಲಾನುಭವಿಗಳು ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ ಸ್ತ್ರೀಶಕ್ತಿ ಯೋಜನೆ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 1/3 ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಸರ್ಕಾರದ ಈ ಎಲ್ಲ ಕಾರ್ಯಕ್ರಮಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. 2001ನೇ ವರ್ಷವನ್ನು" ಮಹಿಳಾ ಸಶಕ್ತಿಕರಣ ವರ್ಷ "ಎಂದು ಘೋಷಿಸಲಾಗಿದೆ ಮಹಿಳೆಯರ ಸಶಕ್ತಿಕರಣ ದಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ವಯಂಸೇವಾ ಸಂಸ್ಥೆಗಳು ಬಹಳ ಮಹತ್ವದ ಪಾತ್ರ ವಹಿಸಿವೆ.

ಮಹಿಳಾ ಸಬಲೀಕರಣ ಮಾಡುವುದು ಹೇಗೆ?

           ಮಹಿಳೆಯು ಸುರಕ್ಷತೆ ಮತ್ತು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ, ಬೌದ್ಧಿಕ ,ಶೈಕ್ಷಣಿಕ ,ಮಾನಸಿಕ ಹಾಗೂ ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯವಿದೆ. ಮಹಿಳೆಯರ ಸುರಕ್ಷತೆಗೋಸ್ಕರ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಕಾನೂನುಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಸಮರ್ಪಕವಾಗಿ ಜಾರಿಗೆ ತರುವ ತನಕ ಮಹಿಳೆಯರ ವಿರುದ್ಧದ ಅಪರಾಧಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅಭಿವೃದ್ಧಿಯಲ್ಲಿ ರಾಜಕೀಯವನ್ನು ಮಾಡಬಾರದು. ಮಹಿಳೆಯರ ವಿರುದ್ಧದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಎಷ್ಟು ಪ್ರಕರಣಗಳನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿದೆ. ಅನೇಕ ಪ್ರಕರಣಗಳು ದೀರ್ಘಕಾಲ ನಡೆಯುತ್ತಿವೆ. ನಮ್ಮ ಕಾನೂನುಗಳಲ್ಲಿಯ ಕೆಲವೊಂದು ಲೋಪದೋಷಗಳಿಂದ ಆರೋಪಿಗಳು ಪಾರಾಗುತ್ತಿದ್ದಾರೆ. ಈ ಕಾನೂನುಗಳನ್ನು ಸರಿಪಡಿಸಬೇಕಾಗಿದೆ ಮಧ್ಯ ಪೂರ್ವ ಮತ್ತು ಅರಬ್ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಮಹಿಳೆಯರಿಗೆ ಹಿಂಸೆ ಕೊಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಮರಣ ದಂಡನೆಯನ್ನು ವಿಧಿಸಬೇಕು. ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು ಹಾಗೂ ಪುರುಷರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸರಕಾರವು ಮಹಿಳೆಯರಿಗೆ ಉಚಿತ ಪ್ರಾಥಮಿಕ ಕಂಪ್ಯೂಟರ್ ತರಬೇತಿಯನ್ನು ಕೊಡಬೇಕು. ಒಳ್ಳೆಯ ಶಿಕ್ಷಣ ಮತ್ತು ಉತ್ತಮ ಉದ್ಯೋಗವಕಾಶಗಳು ಮಹಿಳೆಯರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಶಿಷ್ಯವೇತನ ಕೊಡಬೇಕು ಮತ್ತು ಪದವಿ ಅವರಿಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು. ಮಹಿಳೆಯರು ತಮ್ಮ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಟ್ಟು ತಮ್ಮ ಸ್ವಂತ ಗುರುತನ್ನು ಗುರುತಿಸಿಕೊಳ್ಳಬೇಕು. ಸಮಾಜವು ಮಹಿಳೆಯನ್ನು ಜೀವನದ ಅರ್ಧ ಎಂದು ಒಪ್ಪಿಕೊಳ್ಳಬೇಕು. ಮಹಿಳೆ ಇಲ್ಲದೆ ಪುರುಷ ಜೀವನವು ಅಪೂರ್ಣ ಎಂಬ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು.


🌸🌸🌸🌸🌸🌸🌸🌸🌸🌸🌸🌸🌸🌸🌸🌸

ಉಪಸಂಹಾರ 

ಪ್ರಾಚೀನ ಕಾಲದಿಂದಲೂ ಮಹಿಳೆಯರ ಸ್ಥಾನಮಾನ ಕುಂದುತ್ತಾ ಬಂದಿದೆ. ಹಲವಾರು ಯೋಜನೆಗಳನ್ನು ಹಾಕಿಕೊಂಡರು ಸಮಗ್ರವಾದ ಬದಲಾವಣೆಯಾಗಿಲ್ಲ. ಕೆಲವು ಸಾಮಾಜಿಕ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ಲಿಂಗ ಸಮಾನತೆಯ ಹೋರಾಟವನ್ನು ಪುರುಷರ ವಿರುದ್ಧದ ಹೋರಾಟ ಎಂದು ಪರಿಗಣಿಸಬಾರದು. ಇದು ಮಹಿಳೆಯರ ಶೋಷಣೆಯ ವಿರುದ್ಧದ ಹೋರಾಟ. ಮಹಿಳೆಯ ಸಬಲೀಕರಣ ಕೇವಲ ಸರಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. "ಜವಾಹರ್ ಲಾಲ್ ನೆಹರುರವರು ಜನರನ್ನು ಜಾಗೃತಗೊಳಿಸಿ ಬೇಕಾದರೆ ಮೊದಲು ಮಹಿಳೆಯನ್ನು ಜಾಗೃತಗೊಳಿಸಬೇಕು. ಒಂದು ಸಲ ಮಹಿಳೆ ಪ್ರಗತಿಪಥದಲ್ಲಿ ಚಲಿಸಲು ಪ್ರಾರಂಭಿಸಿದರೆ ಇಡೀ ಕುಟುಂಬ ಹಳ್ಳಿ ಮತ್ತು ಸಂಪೂರ್ಣ ದೇಶದ ಪ್ರಗತಿಯಾಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ಮಹಿಳೆಯರ ಸಬಲೀಕರಣ ದೇಶದ ಪ್ರಗತಿಗೆ ಅತ್ಯವಶ್ಯಕವಾಗಿದೆ.

⚡⚡⚡⚡⚡⚡⚡⚡⚡⚡⚡⚡⚡⚡⚡⚡⚡⚡




Post a Comment

0 Comments

Important PDF Notes

Ad Code