Ad Code

Ticker

6/recent/ticker-posts

Click Below Image to Join Our Telegram For Latest Updates

Introduction of the authors, Smt. Nemichandra. ಕೃತಿಕಾರರ ಪರಿಚಯ ,ಶ್ರೀಮತಿ. ನೇಮಿಚಂದ್ರ.

                🔥 ಶ್ರೀಮತಿ. ನೇಮಿಚಂದ್ರ🔥


          ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬, ೧೯೫೯ ರಂದು ಜನಿಸಿದರು. ತಂದೆ ಪ್ರೊ.ಜಿ.ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರಿನಲ್ಲಿ ಪೂರೈಸಿದರು.ಮೈಸೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಪ್ ಎಂಜನಿಯರಿಂಗ್ ನಿಂದ ಬಿ.ಎಸ್.ಸಿ. ಪದವಿಯನ್ನು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ಸೈನ್ಸ್ ನಿಂದ ಎಂ.ಎಸ್.ಪದವಿಯನ್ನು ಗಳಿಸಿದರು. ಬೆಂಗಳೂರಿನ ಎಚ್.ಎ.ಎಲ್.ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ಕೆಲಸ ನಿರ್ವಹಿಸುತಿದ್ದಾರೆ. ಕನ್ನಡದಲ್ಲಿ ಚಿಂತನ ಪೂರ್ಣ ಲೇಖನ,ಪುಸ್ತಕಗಳನ್ನು  ಬರೆಯುತ್ತಿದ್ದಾರೆ.

              ಇವರ ಪ್ರಮುಖ  ಕೃತಿಗಳೆಂದರೆ ಯಾದ್ ವಶೇಮ್- ಕಾದಂಬರಿ, ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು. 

               ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ  ಇವರ ಪ್ರವಾಸ ಕಥನಗಳು . ಬದುಕು ಬದಲಿಸಬಹುದು ಅಂಕಣ ಬರಹಗಳು, ಮೊದಲಾದವುಗಳು. ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ. ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ.

🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

Post a Comment

0 Comments

Important PDF Notes

Ad Code