ಹೊಸ ಮತಗಳ ಉದಯ, ಜೈನ ಧರ್ಮ
👇 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ
FDA, SDA, PDO, PSI, PC ಮುಂತಾದ ಪರೀಕ್ಷೆಗಳಿಗೆ
ಉಪಯುಕ್ತವಾಗುವ ಜೈನ ಧರ್ಮದ ಸಂಕ್ಷಿಪ್ತ ಮಾಹಿತಿ.
ವರ್ಧಮಾನ ಮಹಾವೀರ
● ಹಿಂದೂ ಧರ್ಮವನ್ನು ವಿರೋಧಿಸಿದ ಮೊಟ್ಟಮೊದಲ ಧರ್ಮ.
● ಜೈನ ಧರ್ಮದ ಪ್ರತಿಪಾದಕರನ್ನು ತೀರ್ಥಂಕರರೆಂದು ಕರೆಯುತ್ತಾರೆ.
● ತೀರ್ಥಂಕರ ಎಂದರೆ ಸಂಸಾರವೆಂಬ ಸಾಗರವನ್ನು ದಾಟಲು ದಾರಿತೋರಿಸುವ ಎಂದರ್ಥ.
● ಜೈನಧರ್ಮದ ಪರಂಪರೆಯಲ್ಲಿ 24 ತೀರ್ಥಂಕರರು ಕಂಡುಬರುತ್ತಾರೆ.
● ಮೊದಲ ತೀರ್ಥಂಕರ ವೃಷಭನಾಥನ / ಆದಿನಾಥ
● 23ನೇ ತೀರ್ಥಂಕರ ಪಾರ್ಶ್ವನಾಥ
● 24ನೇ ತೀರ್ಥಂಕರ ಮತ್ತು ಪ್ರಸಿದ್ಧ ತೀರ್ಥಂಕರ ವರ್ಧಮಾನ ಮಹಾವೀರ
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
ವರ್ಧಮಾನ ಮಹಾವೀರ ಸಾಮಾನ್ಯ ಶಕ ಪೂರ್ವ 599-527
● ಈತ ಬಿಹಾರದ ವೈಶಾಲಿ ಪಕ್ಕದಲ್ಲಿರುವ ಕುಂದ ಅಥವಾ ಕುಂಡಲಿ ಎಂಬ ಗ್ರಾಮದಲ್ಲಿ ಜನಿಸಿದರು.
● ಮೂಲಹೆಸರು ವರ್ಧಮಾನ
● ತಂದೆ ಸಿದ್ಧಾರ್ಥ
● ತಾಯಿ ತ್ರಿಶಲಾದೇವಿ
● ಹೆಂಡತಿ ಯಶೋಧೆ
● ಮಗಳು ಅನುಜ್ಜಾ ಅಥವಾ ಪ್ರಿಯದರ್ಶಿನಿ
● ಅಳಿಯ ಜಮಾಲಿ
● ಮಹಾವೀರ ತನ್ನ ತಂದೆ-ತಾಯಿಯರ ಆಕಸ್ಮಿಕ ಮರಣದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ 30ನೇ ವಯಸ್ಸಿನಲ್ಲಿ ಸಂಸಾರಿಕ ಜೀವನವನ್ನು ತ್ಯಜಿಸಿದನು.
● ವರ್ಧಮಾನ್ ಲೋಕ ಜ್ಞಾನಕ್ಕಾಗಿ ತನ್ನ ಸಮಕಾಲೀನ ವಯಸ್ಕ ಮಸ್ಕಾಲಿಗೋಸಲಪುತ್ತನನ್ನು ತನ್ನ ಗುರುವಾಗಿ ಸ್ವೀಕರಿಸಿಕೊಂಡನು. ಇವನಿಂದ ಯಾವುದೇ ಜ್ಞಾನೋದಯವಾದ ಕಾರಣ ಇವನನ್ನು ಬಿಟ್ಟು ಅಲೆಮಾರಿಯಾದನು.
● ಈತ 43 ನೇ ವಯಸ್ಸಿನಲ್ಲಿ ಬಿಹಾರದ ಜೃಂಬಕ ಗ್ರಾಮದ ಋಜುಪಾಲಿಕಾ ನದಿಯ ದಂಡೆಯ ಮೇಲಿನ ಸಾಲು ಮರದ ಕೆಳಗಡೆ ತಪಸ್ಸಿಗೆ ಕುಳಿತನು ತಪಸ್ಸಿಗೆ ಕುಳಿತನು. ಹತ್ತನೇ ದಿನಕ್ಕೆ ಕೈವಲ್ಯ (ಸರ್ವಜ್ಞಾನಿ) ಜ್ಞಾನ ಲಭಿಸಿ ಮಹಾವೀರ ಎನಿಸಿಕೊಂಡನು.
● ಮಹಾವೀರ ಎಂದರೆ ಎಲ್ಲವನ್ನೂ ಜಯಿಸಿದವನು ಎಂದರ್ಥ.
● ಮಹಾವೀರ ತಾನು ಪಡೆದುಕೊಂಡ ಜ್ಞಾನವನ್ನು ತನ್ನ 11 ಜನ ಶಿಷ್ಯರಿಗೆ ಬೋಧಿಸಿದರನು.
● ಮಹಾವೀರನ 11 ಜನ ಶಿಷ್ಯರಿಂದ ಗುಂಪಿಗೆ ಗಣಾಧರರು ಅಥವಾ ಗಾಂಧಾರರು ಎಂದು ಕರೆಯುತ್ತಿದ್ದರು.
● ಮಹಾವೀರ ಬಿಹಾರದ ಪಾವಪುರಿ ಎಂಬಲ್ಲಿ ಮರಣಹೊಂದಿದನು.
💮💮💮💮💮💮💮💮💮💮💮💮💮💮💮💮💮
ಜೈನ ಧರ್ಮದ ತತ್ವಗಳು ಅಥವಾ ಬೋಧನೆಗಳು
01.ಅಹಿಂಸೆ
02. ಸತ್ಯ
03.ಅಸ್ತೇಯ( ಕಳ್ಳತನ ಮಾಡದಿರುವುದು )
04.ಅಪರಿಗ್ರಹ( ಅವಶ್ಯಕತೆಗಿಂತಲೂ ಹೆಚ್ಚಿನ ಸಂಪತ್ತು ಸಂಗ್ರಹಿಸದಿರುವುದು)
05.ಬ್ರಹ್ಮಚರ್ಯ ( ಪವಿತ್ರತೆ ಅಥವಾ ಇಂದ್ರಿಯಗಳನ್ನು ನಿಗ್ರಹಿಸುವುದು )
ತ್ರಿರತ್ನಗಳು
01.ಸಮ್ಯಕ ಜ್ಞಾನ
02. ಸಮ್ಯಕ ನಂಬಿಕೆ
03. ಸಮ್ಯಕ ನಡತೆ
ಗ್ರಂಥಗಳು
ಜೈನ ಧರ್ಮದ ಗ್ರಂಥಗಳಿಗೆ ಅಂಗಗಳು ಎಂದು ಕರೆಯುತ್ತಾರೆ ಪ್ರಾಕೃತ ಭಾಷೆಯಲ್ಲಿದ್ದು ಅರ್ಧಮಾಗದಿ ಲಿಪಿಯನ್ನು ಒಳಗೊಂಡಿವೆ.
ಜೈನ ಧರ್ಮದ ಪಂಗಡಗಳು
01.ಶ್ವೇತಾಂಬರ ➖ ಉತ್ತರಭಾರತ ➖ಸ್ಥೂಲಭದ್ರ ಪ್ರಚಾರ
02. ದಿಗಂಬರ➖ ದಕ್ಷಿಣ ಭಾರತ ➖ಭದ್ರಬಾಹು ಪ್ರಚಾರ ಮಾಡಿದರು.
ಶ್ವೇತಾಂಬರರು
● ಇವರು ಪಾರ್ಶ್ವನಾಥನ ಅನುಯಾಯಿಗಳು.
● ಬಿಳಿಯ ಬಟ್ಟೆಗಳನ್ನು ಧರಿಸುತ್ತಿದ್ದರು.
● ಇವರ ಆಚರಣೆಗಳು ಸರಳವಾಗಿದ್ದವು.
● ಇವರ ನಾಯಕ ಸ್ಥೂಲಭದ್ರ.
ದಿಗಂಬರರು
● ಮಹಾವೀರನ ಅನುಯಾಯಿಗಳು.
● ಯಾವುದೇ ಬಟ್ಟೆಯನ್ನು ಧರಿಸುತ್ತಿರಲಿಲ್ಲ.
● ಇವರ ಆಚರಣೆಗಳು ಕಠಿಣವಾಗಿದ್ದವು.
● ಇವರ ನಾಯಕ ಭದ್ರಬಾಹು.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ಜೈನ ಧರ್ಮದ ಸಮ್ಮೇಳನಗಳು
ಮೊದಲ ಸಮ್ಮೇಳನ
● ಸ್ಥಳ ➖ಪಾಟಲಿಪುತ್ರ
● ವರ್ಷ ➖ ಸಾಮಾನ್ಯ ಶಕ ಪೂರ್ವ 300
● ಅಧ್ಯಕ್ಷ ➖ ಸ್ಥೂಲಭದ್ರ
ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು ಕ್ರೋಡೀಕರಿಿಸಲಾಯಿತು.
ಎರಡನೇ ಸಮ್ಮೇಳನ
● ಸ್ಥಳ ➖ ಗುಜರಾತ್( ವಲ್ಲಭಿ )
● ವರ್ಷ ➖ ಸಾಮಾನ್ಯ ಶಕ 512
● ಅಧ್ಯಕ್ಷ ➖ ದೇವಿಂದ್ರ ಕ್ಷೇಮಕರಣ
ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು ವಿಶ್ಲೇಷಣೆ ಮಾಡಿ ಗ್ರಂಥರೂಪದಲ್ಲಿ ಬಿಡುಗಡೆ ಮಾಡಲಾಯಿತು.
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಜೈನ ಧರ್ಮದ ಕೊಡುಗೆ
● ಜೈನ ಸನ್ಯಾಸಿಗಳು ಉಳಿದುಕೊಳ್ಳಲು ಕೆಲವು ಗುಹಾಲಯಗಳು ಮತ್ತು ಬಸದಿಗಳನ್ನು ನಿರ್ಮಿಸಲಾಯಿತು. ಅವುಗಳೆಂದರೆ ಉದಯಗಿರಿ ,ಎಲ್ಲೋರಾ
ಉದಯಗಿರಿ ➖ ಹುಲಿಯ ಗುಹೆ
ಎಲ್ಲೋರಾ ➖ ಇಂದ್ರಸಭಾ ಗುಹೆ
ಓರಿಸ್ಸಾ ➖ ಹಾಥಿಗುಂಪಾ ಶಾಸನ ಮತ್ತು ಗುಹೆ
ಮೂಡಬಿದರೆ ➖ ಸಾವಿರ ಕಂಬಗಳ ಬಸದಿ
ಶ್ರವಣಬೆಳಗೊಳ ➖ ಗೊಮ್ಮಟೇಶ್ವರ ವಿಗ್ರಹ
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ವಿಶೇಷ ಅಂಶಗಳು
🔅 ವೃಷಭನಾಥನ ಧಾರ್ಮಿಕ ಚಿಹ್ನೆ ಎತ್ತು
🔅 ಪಾರ್ಶ್ವನಾಥನ ಧಾರ್ಮಿಕ ಚಿಹ್ನೆ ಹಾವು
🔅 ಮಹಾವೀರನ ಧಾರ್ಮಿಕ ಚಿಹ್ನೆ ಸಿಂಹ
🔅 ಜೈನರ ಧಾರ್ಮಿಕ ಚಿಹ್ನೆ ಸ್ವಸ್ತಿಕ್
🔅 ಜೈನರ ಕಾಶಿ ಶ್ರವಣಬೆಳಗೊಳ
🔅 ಸಾವಿರ ಕಂಬಗಳ ಬಸದಿ ಮೂಡಬಿದರೆ
🔅 ಜೈನರ ಪ್ರಾರ್ಥನಾ ಮಂದಿರಗಳು ಬಸದಿಗಳು
🔅 ಒಂದನೇ ತೀರ್ಥಂಕರ ವಿಗ್ರಹ ಕಂಡುಬಂದ ಸ್ಥಳ ಮಥುರಾ
🔅 ಜೈನ ಧರ್ಮದ 24 ಜನ ತೀರ್ಥಂಕರರ ಬಗ್ಗೆ ಉಲ್ಲೇಖಗಳು ಕಂಡುಬಂದ ಮೊದಲ ಗ್ರಂಥ ಕಲ್ಪಸೂತ್ರ (ಭದ್ರಬಾಹು)
🔅 ಮಹಾವೀರನ ಮೊದಲ ಶಿಷ್ಯ ಇಂದ್ರಭೂತಿ
🔅 ಜೈನಧರ್ಮದಲ್ಲಿ ಮಹಿಳೆಯರಿಗೂ ಸನ್ಯಾಸಿಯಾಗಲು ಅವಕಾಶ ನೀಡಲಾಗಿತ್ತು. ಅವರು ಮಹಾವೀರನ ಸಹೋದರ ಸಂಬಂಧಿ ಖಂಡನಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
🔅 ಜೈನರ ದೇವಾಲಯಗಳು ರಾಜಸ್ಥಾನದ ಮೌಂಟ್ ಅಬು ಪರ್ವತದಲ್ಲಿ ಕಂಡುಬರುತ್ತವೆ.
🔅 ಪಾರ್ಶ್ವನಾಥನಿಗೆ ಸಂಬಂಧಿಸಿದವುಗಳಾಗಿವೆ ಇವುಗಳನ್ನು ದಿಲ್ವಾರ ದೇವಾಲಯಗಳೆಂದು ಕರೆಯುವರು .
🔅 ಜಾಕೋಬಿಯವರ ಪ್ರಕಾರ ಜೈನ ಧರ್ಮದ ನಿಜವಾದ ಸ್ಥಾಪಕ ಎಂದರೆ ಪಾಶ್ವನಾಥ.
🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷

0 Comments