ಕರ್ನಾಟಕ ಇತಿಹಾಸ ಬಹುಆಯ್ಕೆಯ ಪ್ರಶ್ನೋತ್ತರಗಳು ಭಾಗ 3.
101. ವಿಶ್ವವಿಖ್ಯಾತ ಪಿಸುಮಾತಿನ ಮೊಗಸಾಲೆ ಯಾವ ಕಟ್ಟಡದಲ್ಲಿದೆ?
ಎ. ಇಬ್ರಾಹಿಂ ರೋಜಾ
ಬಿ. ಗೋಳಗುಮ್ಮಟ ✔✔
ಸಿ.ಮದರಸಾ
ಡಿ. ಬಂದೇನವಾಜ್ ದರ್ಗಾ.
102. ದಕ್ಷಿಣ ಭಾರತದ ತಾಜಮಹಲ್ ಎಂದು ಯಾವ ಕಟ್ಟಡವನ್ನು ಕರೆಯುತ್ತಾರೆ?
ಎ. ಗೋಲಗುಮ್ಮಟ
ಬಿ. ಇಬ್ರಾಹಿಂ ರೋಜಾ ✔✔
ಸಿ. ಬೇಲೂರು
ಡಿ. ಹಂಪೆ.
103. ಶಿವಪ್ಪನಾಯಕನ ಶಿಸ್ತು ಏತಕ್ಕೆ ಪ್ರಸಿದ್ಧಿಯಾಗಿದೆ?
ಎ. ಭೂಕಂದಾಯ ✔✔
ಬಿ. ತೆರಿಗೆ
ಸಿ. ಸೈನಿಕ ಸಿಸ್ತು
ಡಿ. ವ್ಯಾಪಾರ.
104. ಬಿದನೂರನ್ನು 1773 ರಲ್ಲಿ ವಶಪಡಿಸಿಕೊಂಡವರು ಯಾರು?
ಎ. ಚಿಕ್ಕದೇವರಾಯ ಒಡೆಯರ್
ಬಿ. ಶಿವಾಜಿ
ಸಿ. ಹೈದರಾಲಿ ✔✔
ಡಿ. ಏಕೋಜಿ.
105. ಚಿತ್ರದುರ್ಗ ಕೋಟೆ ಯನ್ನು ಉಳಿಸಲು ಹೋರಾಡಿದ ವೀರ ಮಹಿಳೆ ಯಾರು?
ಎ. ಕಿತ್ತೂರು ಚೆನ್ನಮ್ಮ
ಬಿ. ಜಾನ್ಸಿರಾಣಿ
ಸಿ.ಶಾಂತಲಾದೇವಿ
ಡಿ.ಓಬವ್ವ.✔✔
106. ಬೆಂಗಳೂರು ನಗರದ ನಿರ್ಮಾತೃ ಯಾರು?
ಎ. ಕೆಂಪೇಗೌಡ ✔✔
ಬಿ. ಚಿಕ್ಕದೇವರಾಜ ಒಡೆಯರ್
ಸಿ.ಸರ್ ಮಾರ್ಕ್ ಕಬ್ಬನ್
ಡಿ. ಕಾಸಿಮ್ ಖಾನ್.
107. ರಾಜ ಜಗದೇವ ಎಂಬ ಬಿರುದನ್ನು ಔರಂಗಜೇಬನು ಯಾರಿಗೆ ನೀಡಿದನು?
ಎ. ದೊಡ್ಡದೇವರಾಜ ಒಡೆಯರ್
ಬಿ. ರಾಜ ಒಡೆಯರ್
ಸಿ.ಚಿಕ್ಕದೇವರಾಜ ಒಡೆಯರ್ ✔✔
ಡಿ.ಜಯಚಾಮರಾಜ ಒಡೆಯರ್.
108. ನವಕೋಟಿ ನಾರಾಯಣ ಎಂದು ಯಾರನ್ನು ಕರೆಯುತ್ತಿದ್ದರು?
ಎ. ಚಿಕ್ಕದೇವರಾಜ ಒಡೆಯರ್ ✔✔
ಬಿ.ರಣಧೀರ ಕಂಠೀರವ
ಸಿ.ನಾಲ್ವಡಿ ಕೃಷ್ಣರಾಜ ಒಡೆಯರ್ .
ಡಿ. ಇಮ್ಮಡಿ ಕೃಷ್ಣರಾಜ ಒಡೆಯರ್.
109. ಕನ್ನಡದ ಮೊಟ್ಟ ಮೊದಲ ನಾಟಕ ಯಾವುದು?
ಎ. ಮೃಚ್ಛಕಟಿಕ
ಬಿ.ಶಕುಂತಲಾ
ಸಿ. ಮಿತ್ರಾವಿಂದ ಗೋವಿಂದ ✔✔
ಡಿ. ಸಂಗೀತ ಚೂಡಾಮಣಿ.
110. ಕನ್ನಡದ ಮೊದಲ ನಾಟಕ ವನ್ನು ರಚಿಸಿದವರು ಯಾರು?
ಎ. ಸಿಂಗರಾರ್ಯ ✔✔
ಬಿ. ಚಾವುಂಡರಾಯ
ಸಿ.ರನ್ನ
ಡಿ.ಪಂಪ.
111. ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು?
ಎ. ಚಿಕ್ಕದೇವರಾಜ ಒಡೆಯರು ✔✔
ಬಿ. ಕೃಷ್ಣದೇವರಾಯ
ಸಿ. ನಾಲ್ವಡಿ ಕೃಷ್ಣರಾಜ ಒಡೆಯರ್
ಡಿ.ಆರನೇ ವಿಕ್ರಮಾದಿತ್ಯ.
112. ಹದಿಬದೆಯ ಧರ್ಮದ ಕರ್ತೃ ಯಾರು?
ಎ. ತಿರುಮಲಾಂಬಾ
ಬಿ. ವಿಜಯ ಮಹಾದೇವಿ
ಸಿ. ಸಂಚಿಹೊನ್ನಮ್ಮ ✔✔
ಡಿ. ಚಾಂದಲಾದೇವಿ.
113. ಹೈದರಾಲಿಯನ್ನು ಎಲ್ಲಿ ಪೌಜುದಾರನನ್ನಾಗಿ ನೇಮಿಸಲಾಯಿತು?
ಎ.ಶ್ರೀರಂಗಪಟ್ಟಣ
ಬಿ.ಕೊಯಮತ್ತೂರ್
ಸಿ .ಮೈಸೂರು
ಡಿ. ದಿಂಡಿಗಲ್.✔✔
114. ಮೊದಲನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದಿಂದ ಕೊನೆಗೊಂಡಿತು?
ಎ. ಮದರಾಸು ✔✔
ಬಿ. ಶ್ರೀರಂಗಪಟ್ಟಣ
ಸಿ. ಮಂಗಳೂರು
ಡಿ. ಬೆಂಗಳೂರು.
115. ಎರಡನೇ ಆಂಗ್ಲೋ ಮೈಸೂರು ಯುದ್ಧ ನಡೆದ ಕಾಲ ಯಾವುದು?
ಎ.1767ರಿಂದ 69.
ಬಿ. 1780 ರಿಂದ 84. ✔✔
ಸಿ .1790 ರಿಂದ 91.
ಡಿ .1799.
116. ಹೈದರಾಲಿ ಯಾವ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಡಿದನು?
ಎ.ಒಂದನೇ ಆಂಗ್ಲೋ ಮೈಸೂರು ಯುದ್ಧ
ಬಿ. ಒಂದನೇ ಕರ್ನಾಟಕ ಯುದ್ಧ.
ಸಿ. ಎರಡನೇ ಆಂಗ್ಲೋ ಮೈಸೂರು ಯುದ್ಧ. ✔✔
ಡಿ. ಮೈಸೂರು ಮರಾಠ ಯುದ್ಧ.
117. ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ?
ಎ. ಬ್ರಿಟಿಷರು ಫ್ರೆಂಚರ ಮಾಹೆಯನ್ನು ವಶಪಡಿಸಿಕೊಂಡಿದ್ದು.✔✔
ಬಿ. ತಿರುವನಂತಪುರದ ಮೇಲೆ ಟಿಪ್ಪುವಿನ ದಾಳಿ.
ಸಿ. ವಿದೇಶಿ ರಾಜರುಗಳ ಜೊತೆ ಟಿಪ್ಪುವಿನ ಸಂಪರ್ಕ.
ಡಿ. ಸ್ವಸಹಾಯ ಸೈನಿಕ ಪದ್ಧತಿಗೆ ಸಹಿ ಮಾಡದೆ ಇರುವುದು.
118. ಎರಡನೇ ಆಂಗ್ಲೋ ಮೈಸೂರು ಯುದ್ಧ ಯಾವ ಶಾಂತಿ ಒಪ್ಪಂದದಿಂದ ಕೊನೆಗೊಂಡಿತು?
ಎ.ಮದರಾಸು.
ಬಿ. ಮಂಗಳೂರು. ✔✔
ಸಿ. ಮೈಸೂರು
ಡಿ. ಮಳವಳ್ಳಿ.
119. ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರಾಗಿದ್ದರು?
ಎ.ಲಾರ್ಡ್ ವೆಲ್ಲೆಸ್ಲಿ
ಬಿ.ವಿಲಿಯಂ ಬೆಂಟಿಂಕ್
ಸಿ.ಲಾರ್ಡ್ ಕಾರ್ನವಾಲಿಸ್ ✔✔
ಡಿ. ಲಾರ್ಡ್ ಡಾಲ್ ಹೌಸಿ.
120. ಯಾವಾಗ ಶ್ರೀರಂಗಪಟ್ಟಣ ಒಪ್ಪಂದವನ್ನು ಮಾಡಿಕೊಳ್ಳಲಾಯಿತು?
ಎ 1792 ✔✔
ಬಿ.1790
ಸಿ.1780
ಡಿ.1784
121. ಯಾವ ಒಪ್ಪಂದದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳುಗಳಾಗಿ ಕಳುಹಿಸಿದನು?
ಎ. ಮದರಾಸು
ಬಿ.ಶ್ರೀರಂಗಪಟ್ಟಣ ✔✔
ಸಿ. ಗಜೇಂದ್ರಗಡ
ಡಿ. ಮಂಗಳೂರು.
122. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಯಾವಾಗ ನಡೆಯಿತು?
ಎ. 1790.
ಬಿ. 1890.
ಸಿ. 1922.
ಡಿ. 1799.✔✔
123. ಟಿಪ್ಪುವಿನ ಮರಣದ ನಂತರ ಮೈಸೂರು ಸಿಂಹಾಸನವನ್ನು ಏರಿದ ಒಡೆಯರು ಯಾರು?
ಎ.ನಾಲ್ವಡಿ ಕೃಷ್ಣರಾಜ ಒಡೆಯರ್.
ಬಿ. ಇಮ್ಮಡಿ ಕೃಷ್ಣರಾಜ ಒಡೆಯರ್
ಸಿ. ಜಯಚಾಮರಾಜೇಂದ್ರ ಒಡೆಯರ್.
ಡಿ. ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್.✔✔
124. ಯಾವ ದಂಗೆಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನ ಆಡಳಿತವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು?
ಎ. ಕಿತ್ತೂರು ದಂಗೆ
ಬಿ. ನಗರದಂಗೆ ✔✔
ಸಿ. ದೊಂಡಿಯ ವಾಘನ ದಂಗೆ.
ಡಿ. ಬಾದಾಮಿ ದಂಗೆ.
125. ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು?
ಎ. 1831. ✔✔
ಬಿ. 1731.
ಸಿ. 1800.
ಡಿ. 1799.

0 Comments