ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು
Modern Indian History Questions and Answers Part-2
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
ಇತಿಹಾಸವನ್ನ 3 ಭಾಗ ಮಾಡುತ್ತೇವೆ .
1. ಪ್ರಾಗೈತಿಹಾಸಿಕ ಕಾಲ : ಇಲ್ಲಿ ಲಿಪಿ ಇಲ್ಲ ಓದಲು ಬರೆಯಲು ಸಾಧ್ಯವಿಲ್ಲದನ್ನು ಪ್ರಾಗೈತಿಹಾಸಿಕ ಕಾಲ ಎನ್ನುವರು ಇದರ ಪಿತಾಮಹ ರಾಬರ್ಟ್ ಬ್ರೂಸ್ ಪುಟ್
2. ಇತಿಹಾಸ ಪೂರ್ವ ಕಾಲ : ಇಲ್ಲಿ ಲಿಪಿ ಇದೆ ಆದರೆ ಓದಲು- ಬರೆಯಲು ಸಾಧ್ಯವಿಲ್ಲದನ್ನು ಇತಿಹಾಸ ಪೂರ್ವ ಕಾಲ ಎನ್ನುವರು. ಇಲ್ಲಿ ಚಿತ್ರ ಲಿಪಿಯನ್ನು ಕಾಣುತ್ತೇವೆ.
3. ಇತಿಹಾಸ ಕಾಲ : ಇಲ್ಲಿ ಲಿಪಿ ಇದೆ ಓದಬಹುದು ಮತ್ತು ಬರೆಯಲುಬಹುದು.
ಈ ಇತಿಹಾಸ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಮತ್ತೆ 3 ಭಾಗ ಮಾಡಲಾಗುತ್ತದೆ.
1. ಪ್ರಾಚೀನ ಭಾರತದ ಇತಿಹಾಸ : ಇದು ಸಿಂಧೂ ನಾಗರಿಕತೆಯಿಂದ ಸಾ.ಶ.1206 ವರೆಗಿನ ಕಾಲ
2. ಮಧ್ಯಕಾಲೀನ ಭಾರತದ ಇತಿಹಾಸ : ಇದು ಸಾ.ಶ.1206 ರಿಂದ ಸಾ.ಶ.1707ರವರೆಗಿನ ಇತಿಹಾಸವನ್ನ ಮಧ್ಯಯುಗಿನ ಇತಿಹಾಸ ಅಂತ ಹೇಳಬಹುದು ಇಲ್ಲಿ 2 ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು 1. ದೆಹಲಿ ಸುಲ್ತಾನರು 2. ಮೊಘಲ್ ಸಾಮ್ರಾಜ್ಯ
3. ಆಧುನಿಕ ಭಾರತದ ಇತಿಹಾಸ : ಇದು ಸಾ.ಶ.1707 ರಿಂದ ಸಾ.ಶ. 1947 ರೋ ವರೆಗಿನ ಇತಿಹಾಸ. ಕೆಲವೊಂದಿಷ್ಟು ಇತಿಹಾಸಕಾರರು ಇದು ಸಾ.ಶ.1498 ರಿಂದ ಸಾ.ಶ.1947ರ ವರೆಗೆ ಎಂದು ಹೇಳುತ್ತಾರೆ.
ಆಧುನಿಕ ಭಾರತದ ಇತಿಹಾಸ ಸಂಕ್ಷಿಪ್ತ ಪರಿಚಯ :
ಆಧುನಿಕ ಭಾರತದ ಇತಿಹಾಸ ಎಂಬ ಪದವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ ಭಾರತದ ಇತಿಹಾಸವನ್ನು ಉಲ್ಲೇಖಿಸುತ್ತದೆ. ಈ ಅವಧಿಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳೆಂದರೆ
★ ಮೊಘಲ್ ಸಾಮ್ರಾಜ್ಯದ ಅವನತಿ
★ ಭಾರತದ ಮೇಲೆ ಬ್ರಿಟಿಷ್ ರ ವಿಜಯ
★ 1857 ರ ದಂಗೆ
★ ಎರಡು ವಿಶ್ವ ಯುದ್ಧಗಳ ಸಾಮಾಜಿಕ - ಆರ್ಥಿಕ ಪರಿಣಾಮಗಳು, ಕ್ಷಾಮಗಳು
★ ರಾಷ್ಟ್ರೀಯತೆಯ ಉದಯ
★ ಭಾರತೀಯ ಸ್ವಾತಂತ್ರ್ಯ ಚಳುವಳಿ, ವಿಭಜನೆ
★ ಎಡಪಂಥೀಯ ರಾಜಕೀಯ ಉದಯ
★ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು
★ ಅಲಿಪ್ತ ಚಳುವಳಿ, ನೆಹರೂ ಅವರ ಪಾತ್ರ
★ ಜಾಗತೀಕರಣದ ಪರಿಣಾಮಗಳು ಮತ್ತು ಆರ್ಥಿಕ ನೀತಿಯಲ್ಲಿನ ಬದಲಾವಣೆ ಮುಂತಾದವುಗಳು.
ಈಗ ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಧ್ಯಯನದ ದೃಷ್ಟಿಯಿಂದ 20 ಪ್ರಶ್ನೆಗಳಂತೆ ಪ್ರತಿ ದಿನ ಅಪ್ಲೋಡ್ ಮಾಡಲಾಗುವುದು. ಈ ಒಂದು ವಿಷಯದ ಮೇಲೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಮಾರು 10-12 ಪ್ರಶ್ನೆಗಳು ಪರೀಕ್ಷೆಗೆ ಬರುವ ಸಾಧ್ಯತೆ ಹೆಚ್ಚು ಹಾಗಾಗಿ ಆ ಒಂದು ಕಾರಣಕ್ಕೆ ಈ ಒಂದು ಸಣ್ಣ ಪ್ರಯತ್ನ ಇದರ ಸದುಪಯೋಗ ಪಡೆದುಕೊಳ್ಳಿ.
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು
Modern Indian History Questions and Answers Part-2
1. ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ವರ್ಷದಲ್ಲಿ ಆರಂಭವಾಯಿತು ?
ಎ) 1761
ಬಿ) 1775
ಸಿ) 1782
ಡಿ) 1803
ಸರಿಯಾದ ಉತ್ತರ : ಬಿ) 1775
2. ಮೂರನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮವೇನು ?
ಎ) ಮರಾಠರ ಶಕ್ತಿ ವೃದ್ಧಿಯಾಯಿತು.
ಬಿ) ಮರಾಠ ಸಮೂಹದ ಸ್ಥಾಪನೆ.
ಸಿ) ಮರಾಠ ಶಕ್ತಿಯ ಅಂತ್ಯ ಹಾಗೂ ಬ್ರಿಟಿಷರ ಪ್ರಾಬಲ್ಯ ಆರಂಭ.
ಡಿ) ಬ್ರಿಟಿಷ್ ಮತ್ತು ಮರಾಠ ನಡುವಿನ ಶಾಂತಿಯುತ ಸಹವಾಸ
ಸರಿಯಾದ ಉತ್ತರ : ಸಿ) ಮರಾಠ ಶಕ್ತಿಯ ಅಂತ್ಯ ಹಾಗೂ ಬ್ರಿಟಿಷರ ಪ್ರಾಬಲ್ಯ ಆರಂಭ.
3. ಎರಡನೇ ಆಂಗ್ಲೋ-ಮರಾಠ ಯುದ್ಧದ ವೇಳೆಯಲ್ಲಿ ಭಾರತಕ್ಕೆ ಬಂದ ಗವರ್ನರ್ ಜನರಲ್ ಯಾರು ?
ಎ) ಲಾರ್ಡ್ ಕಾರ್ನ್ವಾಲೀಸ್
ಬಿ) ಲಾರ್ಡ್ ಹೇಸ್ಟಿಂಗ್ಸ್
ಸಿ) ಲಾರ್ಡ್ ಡಾಲ್ ಹೌಸಿ
ಡಿ) ಲಾರ್ಡ್ ವೆಲ್ಲೆಸ್ಲಿ
ಸರಿಯಾದ ಉತ್ತರ : ಡಿ) ಲಾರ್ಡ್ ವೆಲ್ಲೆಸ್ಲಿ
4. ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯವಾಯಿತು ?
ಎ) ಬೆಸ್ಸಿನ್ ಒಪ್ಪಂದ
ಬಿ) ಸಾಲ್ಬಾಯಿ ಒಪ್ಪಂದ
ಸಿ) ಸೂರತ್ ಒಪ್ಪಂದ
ಡಿ) ಪಾಂಡಿಚೇರಿ ಒಪ್ಪಂದ
ಸರಿಯಾದ ಉತ್ತರ : ಬಿ) ಸಾಲ್ಬಾಯಿ ಒಪ್ಪಂದ
5. ಫ್ರೆಂಚರು ಭಾರತದಲ್ಲಿ ತೀವ್ರವಾಗಿ ಪ್ರಭಾವ ಬೀರಿದ್ದ ಪ್ರದೇಶ ಯಾವುದು ?
ಎ) ಬೆಂಗಾಲ್
ಬಿ) ದಕ್ಷಿಣ ಭಾರತ
ಸಿ) ಉತ್ತರ ಭಾರತ
ಡಿ) ಪಂಜಾಬ್
ಸರಿಯಾದ ಉತ್ತರ : ಬಿ) ದಕ್ಷಿಣ ಭಾರತ
6. ಈ ಕೆಳಗಿನ ಯಾವ ಯುದ್ಧಗಳು ಕಾರ್ನಾಟಿಕ್ ಯುದ್ಧಗಳಿಗೆ ಸಂಬಂಧಿಸಿಲ್ಲ ?
ಎ) ವಾಂಡಿವಾಷ್ ಕದನ
ಬಿ) ಆರ್ಕಾಟ್ ಕದನ
ಸಿ) ಬಕ್ಸಾರ್ ಕದನ
ಡಿ) ಅಂಬೂರ್ ಕದನ
ಸರಿಯಾದ ಉತ್ತರ : ಸಿ) ಬಕ್ಸಾರ್ ಕದನ
7. ಯಾವ ಸ್ಥಳೀಯ ಭಾರತೀಯ ಗುಂಪು ಕಾರ್ನಾಟಿಕ್ ಯುದ್ಧಗಳಲ್ಲಿ ಗಮನಾರ್ಹವಾಗಿ ಭಾಗಿಯಾಗಿರಲಿಲ್ಲ ?
ಎ) ಮರಾಠರು
ಬಿ) ಮೊಘಲರು
ಸಿ) ಹೈದರಾಬಾದ್ ನಿಜಾಮ
ಡಿ) ಸಿಖ್ಖರು
ಸರಿಯಾದ ಉತ್ತರ : ಡಿ) ಸಿಖ್ಖರು
8. ಕಾರ್ನಾಟಿಕ್ ಯುದ್ಧಗಳ ನಂತರ ಭಾರತದಲ್ಲಿ ಫ್ರೆಂಚ್ ಮಹತ್ವಾಕಾಂಕ್ಷೆಗಳು ವಿಫಲವಾಗಲು ಮುಖ್ಯ ಕಾರಣವೇನು ?
ಎ) ನೌಕಾ ಶ್ರೇಷ್ಠತೆಯ ಕೊರತೆ
ಬಿ) ಆಂತರಿಕ ಭಾರತೀಯ ದಂಗೆಗಳು
ಸಿ) ದುರ್ಬಲ ಮಿಲಿಟರಿ ನಾಯಕತ್ವ
ಡಿ) ಡಚ್ಚರೊಂದಿಗಿನ ಬ್ರಿಟಿಷ್ ಮೈತ್ರಿ
ಸರಿಯಾದ ಉತ್ತರ : ಎ) ನೌಕಾ ಶ್ರೇಷ್ಠತೆಯ ಕೊರತೆ
9. ಕಾರ್ನಾಟಿಕ್ ಯುದ್ಧಗಳ ದೀರ್ಘಕಾಲೀನ ಪರಿಣಾಮವೇನು ?
ಎ) ಭಾರತದಲ್ಲಿ ಫ್ರೆಂಚ್ ಪ್ರಾಬಲ್ಯ
ಬಿ) ಬ್ರಿಟಿಷ್ ಶಕ್ತಿಯ ಅವನತಿ
ಸಿ) ರಾಜಕೀಯ ಶಕ್ತಿಯಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಉದಯ
ಡಿ) ಮೊಘಲ್ ಸಾಮ್ರಾಜ್ಯ ಬಲವಾಯಿತು
ಸರಿಯಾದ ಉತ್ತರ : ಸಿ) ರಾಜಕೀಯ ಶಕ್ತಿಯಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಉದಯ
10. ಆಂಗ್ಲೋ-ಫ್ರೆಂಚ್ ಯುದ್ಧದ ವೇಳೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ನಾಯಕತ್ವ ನೀಡಿದವರು ಯಾರು ?
ಎ) ರಾಬರ್ಟ್ ಕ್ಲೈವ್
ಬಿ) ಲಾರ್ಡ್ ಡಾಲ್ ಹೌಸಿ
ಸಿ) ಲಾರ್ಡ್ ವೆಲ್ಲೆಸ್ಲಿ
ಡಿ) ಲಾರ್ಡ್ ಕ್ಯಾನಿಂಗ್
ಸರಿಯಾದ ಉತ್ತರ : ಎ) ರಾಬರ್ಟ್ ಕ್ಲೈವ್
11. ಮೂರನೇ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಕೊನೆ ಯಾಗುತ್ತದೆ ?
ಎ) ಪಾಂಡಿಚೇರಿ ಒಪ್ಪಂದ
ಬಿ) ಮಂಗಳೂರು ಒಪ್ಪಂದ
ಸಿ) ಪ್ಯಾರಿಸ್ ಒಪ್ಪಂದ
ಡಿ) ಸಾಲ್ಬಾಯಿ ಒಪ್ಪಂದ
ಸರಿಯಾದ ಉತ್ತರ : ಸಿ) ಪ್ಯಾರಿಸ್ ಒಪ್ಪಂದ
12. ಫ್ರೆಂಚ್ ಗವರ್ನರ್ ಡೊಪ್ಲೇ ಮದ್ರಾಸ್ ನ್ನು ಆಕ್ರಮಿಸಿಕೊಳ್ಳಲು ಯಾರ ಸಹಾಯವನ್ನು ಪಡೆದನು ?
ಎ) ಬರ್ನೆಟ್
ಬಿ) ಅನ್ವರುದ್ದೀನ್
ಸಿ) ಲಾ-ಬೋರ್ಡಿನಾ
ಡಿ) ಮೀರ್ ಖಾಸಿಂ
ಸರಿಯಾದ ಉತ್ತರ : ಸಿ) ಲಾ-ಬೋರ್ಡಿನಾ
13. ಈ ಕೆಳಗಿನ ಗವರ್ನರ್ ಜನರಲ್ ಗಳಲ್ಲಿ ಯಾರು ಭಾರತದ ಒಪ್ಪಂದದ ನಾಗರಿಕ ಸೇವೆಯನ್ನು ರಚಿಸಿದರು. ಅದು ನಂತರ ಭಾರತೀಯ ನಾಗರಿಕ ಸೇವೆ ಎಂದು ಕರೆಯಲ್ಪಟ್ಟಿತು ?
ಎ) ವಾರೆನ್ ಹೇಸ್ಟಿಂಗ್ಸ್
ಬಿ) ವೆಲ್ಲೆಸ್ಲಿ
ಸಿ) ಕಾರ್ನ್ ವಾಲಿಸ್
ಡಿ) ವಿಲಿಯಂ ಬೆಂಟಿಂಕ್
ಸರಿಯಾದ ಉತ್ತರ : ಸಿ) ಕಾರ್ನ್ ವಾಲಿಸ್
14. 18ನೇ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದಿಂದ ರಫ್ತು ಮಾಡಿದ ಪ್ರಮುಖ ಸರಕುಗಳೆಂದರೆ ?
ಎ) ಕಚ್ಚಾ ಹತ್ತಿ, ಎಣ್ಣೆ ಬೀಜಗಳು ಮತ್ತು ಅಫೀಮು
ಬಿ) ಸಕ್ಕರೆ, ಉಪ್ಪು, ಸತು ಮತ್ತು ಸೀಸ
ಸಿ) ತಾಮ್ರ, ಬೆಳ್ಳಿ, ಚಿನ್ನ, ಮಸಾಲೆಗಳು ಮತ್ತು ಚಹಾ
ಡಿ) ಹತ್ತಿ, ರೇಷ್ಮೆ, ಉಪ್ಪಿನಕಾಯಿ ಮತ್ತು ಅಫೀಮು
ಸರಿಯಾದ ಉತ್ತರ : ಡಿ) ಹತ್ತಿ, ರೇಷ್ಮೆ, ಉಪ್ಪಿನಕಾಯಿ ಮತ್ತು ಅಫೀಮು
15. ಆರ್ಕಾಟನಲ್ಲಿ ಯಾರ ಯಾರ ನಡುವೆ ಉತ್ತರಾಧಿಕಾರತ್ವಕ್ಕಾಗಿ ಸಂಘರ್ಷ ನಡೆಯುತ್ತಿತ್ತು?
ಎ) ಚಂದಾಸಾಹೇಬ್ ಮತ್ತು ಅನ್ವರುದ್ದೀನ್
ಬಿ) ನಾಸೀರ್ ಜಂಗ್ ಮತ್ತು ಮುಜಫರ್ ಜಂಗ್
ಸಿ) ಅನ್ವರುದ್ದೀನ್ ಮತ್ತು ನಾಸೀರ್ ಜಂಗ್
ಡಿ) ಚಂದಾಸಾಹೇಬ್ ಮತ್ತು ಮುಜಫರ್ ಜಂಗ್
ಸರಿಯಾದ ಉತ್ತರ : ಎ) ಚಂದಾಸಾಹೇಬ್ ಮತ್ತು ಅನ್ವರುದ್ದೀನ್
16. ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಯಾಗಿದೆ ?
ಎ) ಬಕ್ಸಾರ್ ಕದನ - ಮೀರ್ ಜಾಫರ್ ವಿರುದ್ಧ ಕ್ಲೈವ್
ಬಿ) ವಾಂಡಿವಾಷ್ ಕದನ - ಫ್ರೆಂಚ್ ವಿರುದ್ಧ ಈಸ್ಟ್ ಇಂಡಿಯಾ ಕಂಪನಿ
ಸಿ) ಜಲಿಯನವಾಲಾ ಕದನ - ಡಾಲ್ ಹೌಸಿ ವಿರುದ್ಧ ಮರಾಠರು
ಡಿ) ಖಾರ್ದಾ ಕದನ - ನಿಜಾಮ್ ವಿರುದ್ಧ ಈಸ್ಟ್ ಇಂಡಿಯಾ ಕಂಪನಿ
ಸರಿಯಾದ ಉತ್ತರ : ಬಿ) ವಾಂಡಿವಾಷ್ ಕದನ - ಫ್ರೆಂಚ್ ವಿರುದ್ಧ ಈಸ್ಟ್ ಇಂಡಿಯಾ ಕಂಪನಿ
17. ಮೊದಲ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಗುತ್ತದೆ ?
ಎ) ಪಾಂಡಿಚೇರಿ
ಬಿ) ಎಕ್ಸ-ಲಾ-ಛಾಪೆಲ್
ಸಿ) ಸಾಲ್ಬಾಯಿ ಒಪ್ಪಂದ
ಡಿ) ಪ್ಯಾರಿಸ್ ಒಪ್ಪಂದ
ಸರಿಯಾದ ಉತ್ತರ : ಬಿ) ಎಕ್ಸ-ಲಾ-ಛಾಪೆಲ್
18. ಎರಡನೆಯ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯಗೊಳ್ಳುತ್ತದೆ?
ಎ) ಮಂಗಳೂರು ಒಪ್ಪಂದ
ಬಿ) ಪಾಂಡಿಚೇರಿ ಒಪ್ಪಂದ
ಸಿ) ಎಕ್ಸ-ಲಾ-ಛಾಫೆಲ್
ಡಿ) ಪ್ಯಾರಿಸ್ ಒಪ್ಪಂದ
ಸರಿಯಾದ ಉತ್ತರ : ಬಿ) ಪಾಂಡಿಚೇರಿ ಒಪ್ಪಂದ
19. ಭಾರತದಿಂದ ಬ್ರಿಟಿಷರನ್ನು ಹೊರಹಾಕಲು ಫ್ರೆಂಚ್ ಸರ್ಕಾರ ಯಾರನ್ನು ಭಾರತಕ್ಕೆ ಕಳುಹಿಸಿತು ?
ಎ) ಕೌಂಟ್-ಡಿ-ಲ್ಯಾಲಿ
ಬಿ) ಬುಸ್ಸಿ
ಸಿ) ರಾಬರ್ಟ್ ಕ್ಲೈವ್
ಡಿ) ಡ್ಯುಪ್ಲೆ
ಸರಿಯಾದ ಉತ್ತರ : ಎ) ಕೌಂಟ್-ಡಿ-ಲ್ಯಾಲಿ
20. 1740 ರಲ್ಲಿ ಆಸ್ಟ್ರಿಯಾದ ಉತ್ತರಾಧಿಕಾರತ್ವದ ಕಾರಣಕ್ಕಾಗಿ ಯಾರ ಯಾರ ನಡುವೆ ಯುದ್ಧ ನಡೆಯಿತು ?
ಎ) ಇಂಗ್ಲೆಂಡ್ ಮತ್ತು ಫ್ರಾನ್ಸ್
ಬಿ) ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್
ಸಿ) ಇಂಗ್ಲೆಂಡ್ ಮತ್ತು ಜರ್ಮನಿ
ಡಿ) ಇಂಗ್ಲೆಂಡ್ ಮತ್ತು ಪೋರ್ಚುಗಲ್
ಸರಿಯಾದ ಉತ್ತರ : ಎ) ಇಂಗ್ಲೆಂಡ್ ಮತ್ತು ಫ್ರಾನ್ಸ್
0 Comments