History Questions For All Competitive Exams Quiz Part-1
ಇತಿಹಾಸದ ಬಹು ಆಯ್ಕೆಯ ಪ್ರಶ್ನೆಗಳು ಭಾಗ-1
ಆತ್ಮೀಯ ಸ್ಪರ್ಧಾ ಮಿತ್ರರೆಲ್ಲರಿಗೂ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ....!!🙏
ಆತ್ಮೀಯ ಸ್ಪರ್ಧಾಮಿತ್ರರೇ........
ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದೇ ಯಶಸ್ಸಿನ ಮೊದಲ ಹೆಜ್ಜೆ. ಬಾವಿ ಶಿಕ್ಷಕರು ಈ ವಾಕ್ಯವನ್ನು ಅಳವಡಿಸಿಕೊಂಡರೆ ಖಂಡಿತ ಯಶಸ್ಸು ಗಳಿಸುತ್ತೀರಿ. ನಮ್ಮ ಉತ್ಸಾಹ ಕೇವಲ ಮಾತಾಗದೇ ಕೃತಿಯಾಗಬೇಕು. ಶಿಕ್ಷಕರಾಗುತ್ತೇವೆ ಎಂದು ನಾವು ನಿರ್ಧರಿಸಿದರೆ ಅದು ನಮ್ಮ ಅರ್ಧ ದಾರಿಯನ್ನೇ ಕ್ರಮಿಸಿದಂತಾಗುತ್ತದೆ. ನಂತರದಲ್ಲಿ ನಮ್ಮ ಪ್ರಯತ್ನಗಳು ಉಳಿದ ದಾರಿಯನ್ನು ಪೂರ್ಣಗೊಳಿಸುತ್ತದೆ. “ನಿಮ್ಮ ಭವಿಷ್ಯದ ಮೇಲೆ ನಂಬಿಕೆ ಇಡಬೇಡಿ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ". ಎಂಬ ಡಾ. ಬಿ.ಆರ್.ಅಂಬೇಡ್ಕರವರ ಮಾತನ್ನು ನಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳೋಣ. ಹಾಗಿದ್ದರೆ ಬನ್ನಿ ಶೈಕ್ಷಣಿಕ ಮನೋವಿಜ್ಞಾನಕ್ಕೆ ಸಂಬಂದಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ನಿಮ್ಮ ಚಾಣಕ್ಯ ಕಣಜ ಪ್ರಸ್ತುತಪಡಿಸುತ್ತಿದೆ.
ಆತ್ಮೀಯ ಸ್ಪರ್ಧಾ ಮಿತ್ರರೇ ಈ ಒಂದು ಕ್ವಿಜ್ ನಿಮಗೆ ತುಂಬಾನೇ ಉಪಯುಕ್ತ .ಇದು ಇತಿಹಾಸದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ಭಾಗವಹಿಸಿ ನಿಮ್ಮ ಅಭ್ಯಾಸವನ್ನ ದೃಢ ಮಾಡಿಕೊಳ್ಳಿ. ಲಿಂಕ್ ಕೆಳಗೆ ಕೊಡಲಾಗಿದೆ ಆ ಲಿಂಕ ಮೂಲಕ ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ .
History Questions For All Competitive Exams Quiz Part-1
ಇತಿಹಾಸದ ಬಹು ಆಯ್ಕೆಯ ಪ್ರಶ್ನೆಗಳು ಭಾಗ-1
1➤ ಶಾತವಾಹನರ ಕಾಲದ ಬೌದ್ಧ ಸ್ತೂಪ ಪಳೆಯುಳಿಕೆಗಳು ---------- ದಲ್ಲಿ ಕಂಡುಬರುತ್ತದೆ?
ⓐ ಸನ್ನತಿ
ⓑ ಕನಗನಹಳ್ಳಿ
ⓒ ಕಲ್ಬುರ್ಗಿ
ⓓ ರಾಜಘಟ್ಟ
➤ ರಾಜಘಟ್ಟ
ಶಾತವಾಹನರ ಕಾಲದ ಬೌದ್ಧ ಸ್ತೂಪ ಪಳೆಯುಳಿಕೆಗಳು ರಾಜಘಟ್ಟದಲ್ಲಿ ಕಂಡುಬರುತ್ತದೆ
2➤ ಮಹಾಸಾಂಘಿಕರ ಅಡಿಯಲ್ಲಿ ಪ್ರಮುಖ ಬೌದ್ಧ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬಂದ ಧಾನ್ಯಕಟಕವು ಈ ಕೆಳಗಿನ ಯಾವ ಪ್ರದೇಶದಲ್ಲಿದೆ?
ⓐ ಆಂಧ್ರ
ⓑ ಗಾಂಧಾರ
ⓒ ಕಳಿಂಗ
ⓓ ಮಗಧ
➤ ಮಗಧ
ವಿವರಣೆ : ಧಾನ್ಯಕಟಕವು ಪ್ರಸ್ತುತ ಆಂಧ್ರಪ್ರದೇಶದಲ್ಲಿದೆ. ಈ ಸ್ಥಳವನ್ನು ಧರಣಿಕೋಟ ಎಂತಲೂ ಕರೆಯುವರು. ಶ್ರೀಮಂತವಾಗಿ ಅಲಂಕರಿಸಲ್ಪಟ್ಟ ಬೌದ್ಧ ಸ್ತೂಪಕ್ಕೆ ಹೆಸರುವಾಸಿಯಾಗಿದೆ. 1797ರಲ್ಲಿ ಕಾಲಿನ ಮೆಕೆಂಜಿ ಪತ್ತೆ ಹಚ್ಚಿದರು
3➤ ಕೆಳಗೆ ತಿಳಿಸಿರುವ ಶಾತವಾಹನ ರಾಜರಲ್ಲಿ ಅಶ್ವಮೇಧ ಯಾಗವನ್ನು ಮಾಡಿದವರು ಯಾರು?
ⓐ ಒಂದನೇ ಶಾತಕರ್ಣಿ
ⓑ ಗೌತಮಿ ಪುತ್ರ ಶಾತಕರ್ಣಿ
ⓒ ಪುಲುಮಾಯಿ
ⓓ ಯಜ್ಞಶ್ರೀ ಶಾತಕರ್ಣಿ
➤ ಗೌತಮಿ ಪುತ್ರ ಶಾತಕರ್ಣಿ
ವಿವರಣೆ : ಒಂದನೇ ಶಾತಕರ್ಣಿಯ ಪತ್ನಿ ನಾಗನಿಕ ಅಥವಾ ನಯನಿಕ ಹೊರಡಿಸಿದ ನಾನಾಘಾಟ್ ಗುಹಾ ಶಾಸನವು ತನ್ನ ಪತಿ ಅಶ್ವಮೇಧ ಯಾಗ ಮಾಡಿದ ಎಂದು ಮಾಹಿತಿ ನೀಡಿದೆ
4➤ ಶಾತವಾಹನರ ಕಾಲದಲ್ಲಿ ಕಂಡುಬರುವ ಅಹರ ಎಂಬುದು --------- ಆಗಿದೆ?
ⓐ ಪ್ರಾಂತ್ಯ
ⓑ ಪಟ್ಟಣ
ⓒ ಜಿಲ್ಲೆ
ⓓ ರಾಜಧಾನಿ
➤ ಪ್ರಾಂತ್ಯ
ವಿವರಣೆ : ಶಾತವಾಹನರು ತಮ್ಮ ರಾಜ್ಯವನ್ನು ಅಹರ ( ಪ್ರಾಂತ್ಯ ) ಗಳಾಗಿ ವಿಭಾಗಿಸಿದ್ದರು. ಉದಾಹರಣೆ ಸೋಪಾರ,ಗೋವರ್ಧನ, ಮಮಲ. ಇವುಗಳ ಮುಖ್ಯಸ್ಥರನ್ನು ಅಮಾತ್ಯರು ಎನ್ನುತ್ತಿದ್ದರು.
5➤ ಶಾತವಾನರ ಕಾಲದಲ್ಲಿ ದಕ್ಷಿಣದಲ್ಲಿದ್ದ ಬಹು ಮುಖ್ಯ ರೇವು ಎಂದು ಟಾಲೇಮಿ ಹೇಳಿದ ರೇವು ಯಾವುದು?
ⓐ ಸೋಪಾರ
ⓑ ಅಮರಾವತಿ
ⓒ ಪೈತಾನ್
ⓓ ಮೋತುಪಲ್ಲಿ
➤ ಸೋಪಾರ
ವಿವರಣೆ : ಶಾತವಾನರ ಕಡಲು ವ್ಯಾಪಾರವು ಬ್ರೋಚ್, ಸೋಪಾರಾ ಮತ್ತು ಕಲ್ಯಾಣ ರೇವು ಪಟ್ಟಣಗಳ ಮೂಲಕ ನಡೆಯುತ್ತಿತ್ತು ಎಂದು ಟಾಲೆಮಿ ತಿಳಿಸಿದ್ದಾನೆ.
6➤ ಕರ್ನಾಟಕದಲ್ಲಿ ಅತ್ಯಂತ ಪುರಾತನ ಸಂಸ್ಕೃತ ಶಾಸನ ಯಾವುದು?
ⓐ ಹಲ್ಮಿಡಿ ಶಾಸನ
ⓑ ಹಂಪಿ ಶಾಸನ
ⓒ ತಾಳಗುಂದ ಶಾಸನ
ⓓ ಶ್ರವಣಬೆಳಗೊಳ ಶಾಸನ
➤ ತಾಳಗುಂದ ಶಾಸನ
ವಿವರಣೆ : ಈ ಶಾಸನ ಶಿವಮೊಗ್ಗ ಜಿಲ್ಲೆಯ ಪ್ರಣವೇಶ್ವರ ದೇವಾಲಯದ ಮುಂಭಾಗದಲ್ಲಿದೆ. ಇದರ ಕಾಲ ಸಾ. ಶ 450. ಇದು ಕರ್ನಾಟಕದ ಮೊದಲ ಸಂಸ್ಕೃತ ಶಾಸನ. ಇದನ್ನ ರಚಿಸಿದವನು ಕವಿ ಕುಬ್ಜ. ಈ ಶಾಸನದಲ್ಲಿ ಕಾಕುತ್ಸವರ್ಮನನ್ನು ಕದಂಬ ಕುಟುಂಬ ಕುಲಭೂಷಣ ಎಂದು ವರ್ಣಿಸಿದೆ.
7➤ ಈ ಕೆಳಗಿನ ಯಾವ ಶಾಸನದಿಂದ ವೀರಶರ್ಮನು ಮಯೂರವರ್ಮನ ಅಜ್ಜನೆಂದು ತಿಳಿದು ಬರುತ್ತದೆ?
ⓐ ಗುಡ್ನಾಪುರ ಶಾಸನ
ⓑ ತಾಳಗುಂದ ಶಾಸನ
ⓒ ಬನವಾಸಿ ಶಾಸನ
ⓓ ಹಲಸಿ ಶಾಸನ
➤ ಗುಡ್ನಾಪುರ ಶಾಸನ
ವಿವರಣೆ : ಗುಡ್ನಾಪುರ ಶಾಸನವು ಬನವಾಸಿಯಲ್ಲಿದ್ದು ಮಯೂರವರ್ಮನ ಪೂರ್ವಜರ (ವೀರಶರ್ಮನ) ಬಗ್ಗೆ ಮಾಹಿತಿ ನೀಡಿದೆ. ಗುಡ್ನಾಪುರ ಶಾಸನವೂ ಕದಂಬರು ಬ್ರಾಹ್ಮಣ ಪಂಗಡಕ್ಕೆ ಸೇರಿದ ಮಾನವ್ಯ ಗೋತ್ರದ ಹಾರತಿ ಪುತ್ರರೆಂದು ಮಾಹಿತಿ ನೀಡುತ್ತದೆ.
8➤ ಕರ್ನಾಟಕದ ಯಾವ ಪುರಾತನ ನಗರವು ಕದಂಬ ರಾಜವಂಶದಿಂದ ಆಳಲ್ಪಟ್ಟಿತ್ತು?
ⓐ ಹೊನ್ನಾವರ
ⓑ ಮೂಡುಬಿದ್ರಿ
ⓒ ಶಿರಸಿ
ⓓ ಭಟ್ಕಳ
➤ ಶಿರಸಿ
ವಿವರಣೆ : ಬನವಾಸಿ ಕದಂಬರು ಆಳ್ವಿಕೆ ಮಾಡಿದ ಮಹತ್ವದ ಸ್ಥಳ ಶಿರಸಿ. ಶಿರಸಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಒಂದು ತಾಲ್ಲೂಕ್ ಆಗಿದೆ. ಶಿರಸಿಯಲ್ಲಿ ಬನವಾಸಿ ಕದಂಬರ ಕಾಲದ ಮಧುಕೇಶ್ವರ ದೇವಾಲಯವಿದೆ. ಬನವಾಸಿಯು ವರದಾನದಿಯ ಎಡದಂಡೆಯ ಮೇಲಿದೆ.
9➤ ಕೋನಾರ್ಕ್ ನಲ್ಲಿರುವ ಪ್ರಖ್ಯಾತ ಸೂರ್ಯ ದೇವಾಲಯದ ನಿರ್ಮಾತೃ?
ⓐ ಪ್ರತಾಪ ರುದ್ರ
ⓑ ಅನಂತವರ್ಮನ್
ⓒ ನರಸಿಂಹ 1
ⓓ ನರಸಿಂಹ 2
➤ ನರಸಿಂಹ 1
ವಿವರಣೆ : ಸುಮಾರು ಸಾ. ಶ. 1250 ರಲ್ಲಿ ಪೂರ್ವ ಗಂಗಾ ರಾಜವಂಶದ ರಾಜ ನರಸಿಂಹ 1 ಕೊನಾರ್ಕ್ ಸೂರ್ಯ ದೇವಾಲಯವನ್ನು ನಿರ್ಮಿಸಿದ. ಈ ಸೂರ್ಯ ದೇವಾಲಯವನ್ನು ಯುರೋಪಿಯನ್ನರು ಬ್ಲಾಕ್ ಪಗೋಡ ಎಂದು ಕರೆದರು ಏಕೆಂದರೆ ಇದು ಬಂಗಾಳಕೊಲ್ಲಿಯಿಂದ ದೈತ್ಯ ಕಪ್ಪು ಶ್ರೇಣಿಯ ಗೋಪುರವಾಗಿ ಕಾಣಿಸಿಕೊಂಡಿತು .
10➤ ಈ ಕೆಳಗಿನ ಸಂತತಿಯ ರಾಜರು ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಸಾಮ್ರಾಜ್ಯ ಹೊಂದಿದ್ದರು?
0 Comments