ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು
Modern Indian History Questions and Answers Part-1
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
ಇತಿಹಾಸವನ್ನ 3 ಭಾಗ ಮಾಡುತ್ತೇವೆ .
1. ಪ್ರಾಗೈತಿಹಾಸಿಕ ಕಾಲ : ಇಲ್ಲಿ ಲಿಪಿ ಇಲ್ಲ ಓದಲು ಬರೆಯಲು ಸಾಧ್ಯವಿಲ್ಲದನ್ನು ಪ್ರಾಗೈತಿಹಾಸಿಕ ಕಾಲ ಎನ್ನುವರು ಇದರ ಪಿತಾಮಹ ರಾಬರ್ಟ್ ಬ್ರೂಸ್ ಪುಟ್
2. ಇತಿಹಾಸ ಪೂರ್ವ ಕಾಲ : ಇಲ್ಲಿ ಲಿಪಿ ಇದೆ ಆದರೆ ಓದಲು- ಬರೆಯಲು ಸಾಧ್ಯವಿಲ್ಲದನ್ನು ಇತಿಹಾಸ ಪೂರ್ವ ಕಾಲ ಎನ್ನುವರು. ಇಲ್ಲಿ ಚಿತ್ರ ಲಿಪಿಯನ್ನು ಕಾಣುತ್ತೇವೆ.
3. ಇತಿಹಾಸ ಕಾಲ : ಇಲ್ಲಿ ಲಿಪಿ ಇದೆ ಓದಬಹುದು ಮತ್ತು ಬರೆಯಲುಬಹುದು.
ಈ ಇತಿಹಾಸ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಮತ್ತೆ 3 ಭಾಗ ಮಾಡಲಾಗುತ್ತದೆ.
1. ಪ್ರಾಚೀನ ಭಾರತದ ಇತಿಹಾಸ : ಇದು ಸಿಂಧೂ ನಾಗರಿಕತೆಯಿಂದ ಸಾ.ಶ.1206 ವರೆಗಿನ ಕಾಲ
2. ಮಧ್ಯಕಾಲೀನ ಭಾರತದ ಇತಿಹಾಸ : ಇದು ಸಾ.ಶ.1206 ರಿಂದ ಸಾ.ಶ.1707ರವರೆಗಿನ ಇತಿಹಾಸವನ್ನ ಮಧ್ಯಯುಗಿನ ಇತಿಹಾಸ ಅಂತ ಹೇಳಬಹುದು ಇಲ್ಲಿ 2 ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು 1. ದೆಹಲಿ ಸುಲ್ತಾನರು 2. ಮೊಘಲ್ ಸಾಮ್ರಾಜ್ಯ
3. ಆಧುನಿಕ ಭಾರತದ ಇತಿಹಾಸ : ಇದು ಸಾ.ಶ.1707 ರಿಂದ ಸಾ.ಶ. 1947 ರೋ ವರೆಗಿನ ಇತಿಹಾಸ. ಕೆಲವೊಂದಿಷ್ಟು ಇತಿಹಾಸಕಾರರು ಇದು ಸಾ.ಶ.1498 ರಿಂದ ಸಾ.ಶ.1947ರ ವರೆಗೆ ಎಂದು ಹೇಳುತ್ತಾರೆ.
ಆಧುನಿಕ ಭಾರತದ ಇತಿಹಾಸ ಸಂಕ್ಷಿಪ್ತ ಪರಿಚಯ :
ಆಧುನಿಕ ಭಾರತದ ಇತಿಹಾಸ ಎಂಬ ಪದವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ ಭಾರತದ ಇತಿಹಾಸವನ್ನು ಉಲ್ಲೇಖಿಸುತ್ತದೆ. ಈ ಅವಧಿಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳೆಂದರೆ
★ ಮೊಘಲ್ ಸಾಮ್ರಾಜ್ಯದ ಅವನತಿ
★ ಭಾರತದ ಮೇಲೆ ಬ್ರಿಟಿಷ್ ರ ವಿಜಯ
★ 1857 ರ ದಂಗೆ
★ ಎರಡು ವಿಶ್ವ ಯುದ್ಧಗಳ ಸಾಮಾಜಿಕ - ಆರ್ಥಿಕ ಪರಿಣಾಮಗಳು, ಕ್ಷಾಮಗಳು
★ ರಾಷ್ಟ್ರೀಯತೆಯ ಉದಯ
★ ಭಾರತೀಯ ಸ್ವಾತಂತ್ರ್ಯ ಚಳುವಳಿ, ವಿಭಜನೆ
★ ಎಡಪಂಥೀಯ ರಾಜಕೀಯ ಉದಯ
★ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು
★ ಅಲಿಪ್ತ ಚಳುವಳಿ, ನೆಹರೂ ಅವರ ಪಾತ್ರ
★ ಜಾಗತೀಕರಣದ ಪರಿಣಾಮಗಳು ಮತ್ತು ಆರ್ಥಿಕ ನೀತಿಯಲ್ಲಿನ ಬದಲಾವಣೆ ಮುಂತಾದವುಗಳು.
ಈಗ ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಧ್ಯಯನದ ದೃಷ್ಟಿಯಿಂದ 20 ಪ್ರಶ್ನೆಗಳಂತೆ ಪ್ರತಿ ದಿನ ಅಪ್ಲೋಡ್ ಮಾಡಲಾಗುವುದು. ಈ ಒಂದು ವಿಷಯದ ಮೇಲೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಮಾರು 10-12 ಪ್ರಶ್ನೆಗಳು ಪರೀಕ್ಷೆಗೆ ಬರುವ ಸಾಧ್ಯತೆ ಹೆಚ್ಚು ಹಾಗಾಗಿ ಆ ಒಂದು ಕಾರಣಕ್ಕೆ ಈ ಒಂದು ಸಣ್ಣ ಪ್ರಯತ್ನ ಇದರ ಸದುಪಯೋಗ ಪಡೆದುಕೊಳ್ಳಿ.
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು
Modern Indian History Questions and Answers Part-1
1. ಭಾರತದ ಯಾವ ಸ್ಥಳದಲ್ಲಿ ಫ್ರೆಂಚರು ತಮ್ಮ ಆರಂಭಿಕ ಕಾರ್ಖಾನೆಯನ್ನು ಸ್ಥಾಪಿಸಿದರು ?
ಎ) ಸೂರತ್
ಬಿ) ಪುಲಿಕಾಟ್
ಸಿ) ಕೊಚ್ಚಿನ್
ಡಿ) ಕಾಸಿಂ ಬಜಾರ್
ಸರಿಯಾದ ಉತ್ತರ : ಎ) ಸೂರತ್
2. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಭಾರತದ ಯಾವ ಪ್ರದೇಶವು ಅಫೀಮು ಉತ್ಪಾದನೆಗೆ ಪ್ರಸಿದ್ಧವಾಗಿತ್ತು ?
ಎ) ಬಿಹಾರ
ಬಿ) ದಕ್ಷಿಣ ಭಾರತ
ಸಿ) ಗುಜರಾತ್
ಡಿ) ಆಸ್ಸಾಂ
ಸರಿಯಾದ ಉತ್ತರ : ಎ) ಬಿಹಾರ
3. ಯಾವ ಮೊಘಲ್ ಚಕ್ರವರ್ತಿಯ ಆಳ್ವಿಕೆ ಯಲ್ಲಿ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಮೊದಲ ಕಾರ್ಖಾನೆಯನ್ನು ಸ್ಥಾಪಿಸಿತು ?
ಎ) ಅಕ್ಟರ್
ಬಿ) ಜಹಾಂಗೀರ್
ಸಿ) ಷಹಜಹಾನ್
ಡಿ) ಔರಂಗಜೇಬ್
ಸರಿಯಾದ ಉತ್ತರ : ಬಿ) ಜಹಾಂಗೀರ್
4. ಈ ಕೆಳಗಿನವರಲ್ಲಿ ಕಲ್ಕತ್ತಾದ ಸ್ಥಾಪಕರು ಯಾರು ?
ಎ) ಚಾರ್ಲ್ಸ್ ಅಯರ್
ಬಿ) ಜಾಬ್ ಚಾರ್ನಾಕ್
ಸಿ) ಹೆರಾಲ್ಡ್ ಆಂಜಿಯರ್
ಡಿ) ವಿಲಿಯಂ ನೋಮ್ರಸ್
ಸರಿಯಾದ ಉತ್ತರ : ಬಿ) ಜಾಬ್ ಚಾರ್ನಾಕ್
5. ಭಾರತದೊಂದಿಗೆ ವ್ಯಾಪಾರ ಮಾಡಲು ಬಂದ ಮೊದಲ ಕೂಡು ಬಂಡವಾಳ ಕಂಪನಿಯನ್ನು ಯಾರು ಸ್ಥಾಪಿಸಿದರು ?
ಎ) ಪೋರ್ಚುಗೀಸರು
ಬಿ) ಡಚ್ಚರು
ಸಿ) ಫ್ರೆಂಚರು
ಡಿ) ಡ್ಯಾನಿಷ್ ರು
ಸರಿಯಾದ ಉತ್ತರ : ಬಿ) ಡಚ್ಚರು
6. ಈ ಕೆಳಗಿನ ಯಾವ ಸ್ಥಳಗಳಲ್ಲಿ ಡಚ್ಚರು ತಮ್ಮ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದರು ?
ಎ) ನಾಗಪಟ್ಟಣಂ, ಚಿನ್ಸುರಾ, ಮಚಲಿಪಟ್ಟಣಂ
ಬಿ) ಸೂರತ್, ಭರೂಚ್, ಆಗ್ರಾ
ಸಿ) ಕೊಚ್ಚಿನ್, ಅಹಮದಾಬಾದ್, ಪಾಟ್ನಾ
ಡಿ) ಮೇಲಿನ ಎಲ್ಲವೂ.
ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ.
7. ಭಾರತದಲ್ಲಿ ಸಮುದ್ರ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು ಯಾರು ?
ಎ) ಇಂಗ್ಲೀಷರು
ಬಿ) ಫ್ರೆಂಚರು
ಸಿ) ಪೋರ್ಚುಗೀಸರು
ಡಿ) ಡಚ್ಚರು
ಸರಿಯಾದ ಉತ್ತರ : ಸಿ) ಪೋರ್ಚುಗೀಸರು
8. ಭಾರತದಲ್ಲಿ ಈ ಕೆಳಗಿನ ಯಾವ ಸ್ಥಳದಲ್ಲಿ ಪೋರ್ಚುಗೀಸರು ತಮ್ಮ ಮೊದಲ ಕೋಟೆ ಯನ್ನು ಎಲ್ಲಿ ನಿರ್ಮಿಸಿದರು ?
ಎ) ಕಣ್ಣಾನೂರ್
ಬಿ) ಅಂಜೆದಿವಾ
ಸಿ) ಕೊಚ್ಚಿನ್
ಡಿ) ಗೋವಾ
ಸರಿಯಾದ ಉತ್ತರ : ಸಿ) ಕೊಚ್ಚಿನ್
9. ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ ಸಮಯದಲ್ಲಿ ಇಂಗ್ಲೆಂಡಿನ ಆಡಳಿತಗಾರ ಯಾರು ?
ಎ) ಚಾರ್ಲ್ಸ್ I
ಬಿ) ಎಲಿಜೆಬೆತ್ I
ಸಿ) ಜೇಮ್ಸ್ I
ಡಿ) ಜೇಮ್ಸ್ II
ಸರಿಯಾದ ಉತ್ತರ : ಬಿ) ಎಲಿಜೆಬೆತ್ I
10. 1954ರಲ್ಲಿ ಪಾಂಡಿಚೇರಿಯು ಸ್ವಾತಂತ್ರ್ಯವಾಗುವ ಮೊದಲು ಯಾವ ಯುರೋಪಿಯನ್ನರ ಅಧಿಕಾರವು ಅದನ್ನು ಆಕ್ರಮಿಸಿ ಕೊಂಡಿತ್ತು ?
ಎ) ಫ್ರೆಂಚರು
ಬಿ) ಇಂಗ್ಲಿಷರು
ಸಿ) ಡಚ್ಚರು
ಡಿ) ಪೋರ್ಚುಗೀಸರು
ಸರಿಯಾದ ಉತ್ತರ : ಎ) ಫ್ರೆಂಚರು
11. ಪೋರ್ಚುಗೀಸರ ವಿರುದ್ಧ ಕೆಳದಿಯ ವೆಂಕಟಪ್ಪ ನಾಯಕ ಯುದ್ಧ ಸಾರಿದಾಗ ಆತನಿಗೆ ರಾಣಿ ಅಬ್ಬಕ್ಕದೇವಿ ಆಸರೆ ನೀಡಿದ್ದನ್ನು ದಾಖಲಿಸಿದ ಪೋರ್ಚುಗೀಸ್ ಪ್ರವಾಸಿ ಯಾರು ?
ಎ) ಬಾರ್ಬೋಸಾ
ಬಿ) ಪೈಟ್ರೊ ಡೆಲ್ಲಾವಲ್ಲಿ
ಸಿ) ನ್ಯೂನಿಜ್
ಡಿ) ಡೊಮಿಂಗೋ ಪೇಸ್
ಸರಿಯಾದ ಉತ್ತರ : ಬಿ) ಪೈಟ್ರೊ ಡೆಲ್ಲಾವಲ್ಲಿ
12. ಈ ಕೆಳಕಂಡವರು ಭಾರತವನ್ನು ವಸಾಹತು ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ?
ಎ) ಪೋರ್ಚುಗೀಸ್, ಡೇನರು ಮತ್ತು ಡಚ್ಚರು
ಬಿ) ಡಚ್ಚರು, ಇಂಗ್ಲಿಷ್ ರು ಮತ್ತು ಡೇನರು
ಸಿ) ಸ್ಪೇನಿನವರು, ಜರ್ಮನ್ನರು ಮತ್ತು ಇಟಲಿಯವರು
ಡಿ) ಫ್ರೆಂಚರು, ಡೇನರು ಮತ್ತು ಡಚ್ಚರು
ಸರಿಯಾದ ಉತ್ತರ : ಸಿ) ಸ್ಪೇನಿನವರು, ಜರ್ಮನ್ನರು ಮತ್ತು ಇಟಲಿಯವರು
13. ಬಾಂಬೆ (ಮುಂಬಯಿ) ಯನ್ನು ಪೋರ್ಚುಗೀಸರು ಬ್ರಿಟಿಷರಿಗೆ ವಹಿಸಿಕೊಟ್ಟ ಸಂದರ್ಭ ?
ಎ) ಪೋರ್ಚುಗೀಸರು ರಾಜಕುಮಾರಿ ಕ್ಯಾಥರೀನ್ ಆಫ್ ಬ್ರಿಗಾಂಜಾ ಹಾಗೂ ಚಾರ್ಲ್ಸ್-2 ಇವರ ವಿವಾಹ
ಬಿ) ಸ್ಪೇನ್ ನಿಂದ ಸ್ವಾತಂತ್ರ್ಯ ಪಡೆದ ಪೋರ್ಚುಗಲ್ ಮತ್ತು ಬ್ರಿಟನ್ ನಡುವೆ ಶಾಂತಿಯುತ ಸಂಬಂಧಗಳು
ಸಿ) ಬ್ರಿಟಿಷರ ಕೈಯಲ್ಲಿ ಸ್ಪ್ಯಾನಿಷ್ ಆರಾಡಾ ಸೋಲು ಕಂಡಿದ್ದು
ಡಿ) 1630ರಲ್ಲಿ ಆದ 'ಮ್ಯಾಡ್ರಿಡ್' ಒಪ್ಪಂದ
ಸರಿಯಾದ ಉತ್ತರ : ಎ) ಪೋರ್ಚುಗೀಸರು ರಾಜಕುಮಾರಿ ಕ್ಯಾಥರೀನ್ ಆಫ್ ಬ್ರಿಗಾಂಜಾ ಹಾಗೂ ಚಾರ್ಲ್ಸ್-2 ಇವರ ವಿವಾಹ
14. ಭಾರತದಲ್ಲಿ ಫ್ರೆಂಚ್ ಪ್ರಾಬಲ್ಯವು ಈ ಕದನ ದಿಂದ ಕೊನೆಗೊಂಡಿತು ?
ಎ) ವಾಂಡೀವಾಷ್ ಕದನ
ಬಿ) ಪ್ಲಾಸಿ ಕದನ
ಸಿ) ಬಕ್ಸಾರ್ ಕದನ
ಡಿ) ಪಾಣಿಪತ್ ಕದನ
ಸರಿಯಾದ ಉತ್ತರ : ಎ) ವಾಂಡೀವಾಷ್ ಕದನ
15. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ತಪ್ಪಾಗಿದೆ
ಎ) 1987ರಲ್ಲಿ ಗೋವಾ ಪೂರ್ಣ ರಾಜ್ಯದ ಸ್ಥಾನ ಪಡೆಯಿತು
ಬಿ) ದಿಯು ಖಂಬಾತ್ ಲ್ಲಿಯಲ್ಲಿರುವ ಒಂದು ದ್ವೀಪ ವಾಗಿದೆ.
ಸಿ) ಭಾರತದ ಸಂವಿಧಾನದ 56ನೇ ತಿದ್ದುಪಡಿಯ ಮೂಲಕ ದಿಯು ಮತ್ತು ದಮನ್ಗಳನ್ನು ಗೋವಾ ದಿಂದ ಬೇರ್ಪಡಿಸಲಾಯಿತು.
ಡಿ) ದಾದ್ರಾ ಮತ್ತು ನಗರಹವೇಲಿಗಳು 1954ರ ವರೆಗೆ ಫ್ರೆಂಚ್ ವಸಾಹತುಶಾಹಿ ಆಳ್ವಿಕೆಯಲ್ಲಿದ್ದವು
ಸರಿಯಾದ ಉತ್ತರ : ಡಿ) ದಾದ್ರಾ ಮತ್ತು ನಗರಹವೇಲಿಗಳು 1954ರ ವರೆಗೆ ಫ್ರೆಂಚ್ ವಸಾಹತುಶಾಹಿ ಆಳ್ವಿಕೆಯಲ್ಲಿದ್ದವು
16. ಸಾಮ್ರಾಜ್ಯದ ವಿಸ್ತರಣೆಯ ಉದ್ದೇಶದಿಂದ ಭಾರತೀಯ ರಾಜರ ಆಂತರಿಕ ಕಲಹದಲ್ಲಿ ಭಾಗವಹಿಸುವ ನೀತಿಯನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ನರು ಯಾರು ?
ಎ) ರಾಬರ್ಟ್ ಡ್ರೈವ್
ಬಿ) ಡ್ಯುಪ್ಲೆಕ್ಸ್
ಸಿ) ಅಲ್ಬುಕರ್ಕ್
ಡಿ) ವಾರೆನ್ ಹೇಸ್ಟಿಂಗ್ಸ್
ಸರಿಯಾದ ಉತ್ತರ : ಬಿ) ಡ್ಯುಪ್ಲೆಕ್ಸ್
17. ಬಂಗಾಳಕೊಲ್ಲಿಯಲ್ಲಿ ಕಡಲ್ಗಳ್ಳತನಕ್ಕೆ ಹೂಗ್ಲಿ ಯನ್ನು ನೆಲೆಯಾಗಿ ಬಳಸಿಕೊಂಡವರು ಯಾರು ?
ಎ) ಪೋರ್ಚುಗೀಸರು
ಬಿ) ಫ್ರೆಂಚರು
ಸಿ) ಡ್ಯಾನಿಷರು
ಡಿ) ಬ್ರಿಟಿಷರು
ಸರಿಯಾದ ಉತ್ತರ : ಎ) ಪೋರ್ಚುಗೀಸರು
18. ಈ ಕೆಳಗಿನವುಗಳಲ್ಲಿ ಬ್ರಿಟಿಷರು ಭಾರತದಲ್ಲಿ ನಿರ್ಮಿಸಿದ ಮೊದಲ ಕೋಟೆ ಯಾವುದು ?
ಎ) ಫೋರ್ಟ್ ವಿಲಿಯಂ
ಬಿ) ಫೋರ್ಟ್ ಸೇಂಟ್ ಜಾರ್ಜ್
ಸಿ) ಫೋರ್ಟ್ ಸೇಂಟ್ ಡೇವಿಡ್
ಡಿ) ಫೋರ್ಟ್ ಸೇಂಟ್ ಎಂಜೆಲೊ
ಸರಿಯಾದ ಉತ್ತರ : ಬಿ) ಫೋರ್ಟ್ ಸೇಂಟ್ ಜಾರ್ಜ್
19. ಸ್ವತಂತ್ರ್ಯ ಪೂರ್ವ ಭಾರತಕ್ಕೆ ವ್ಯಾಪಾರಿಗಳಾಗಿ ಬಂದ ಕೊನೆಯ ಯುರೋಪಿಯನ್ನರು ಯಾರು ?
ಎ) ಡಚ್ಚರು
ಬಿ) ಇಂಗ್ಲೀಷರು
ಸಿ) ಫ್ರೆಂಚರು
ಡಿ) ಪೋರ್ಚುಗೀಸರು
ಸರಿಯಾದ ಉತ್ತರ : ಸಿ) ಫ್ರೆಂಚರು
20. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಮೊಘಲ್ ಚಕ್ರವರ್ತಿಯಿಂದ ಹೈದರಾಬಾದ್, ಬಂಗಾಳ, ಗುಜರಾತ್ ಪ್ರದೇಶಗಳಲ್ಲಿ ತೆರಿಗೆ ರಹಿತ ವ್ಯಾಪಾರ ಮಾಡಲು ಅನುಮತಿ ಪಡೆದರು. ಇದರ ಪರಿಣಾಮ
ಎ) ಹೈದರಾಬಾದ್, ಬಂಗಾಳ, ಗುಜರಾತ್ ಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದರು.
ಬಿ) ಚಕ್ರವರ್ತಿಯ ಸಾಮಂತರಾಗಿ ಹೈದರಾಬಾದ್, ಬಂಗಾಳ, ಗುಜರಾತ್ ಗಳಲ್ಲಿ ಆಳಿದರು.
ಸಿ) ಬಕ್ಸಾರ್ ಕದನ ನಡೆಯಿತು.
ಡಿ) ಚಕ್ರವರ್ತಿಗೆ ಪ್ರತಿವರ್ಷ 3000 ರೂಪಾಯಿಗಳನ್ನು ಕೊಡಬೇಕಾಯಿತು.
ಸರಿಯಾದ ಉತ್ತರ : ಎ) ಹೈದರಾಬಾದ್, ಬಂಗಾಳ, ಗುಜರಾತ್ ಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದರು.
0 Comments